Wednesday 29 May 2019

8 ಬಗೆಯ ಆರ್ಯರು ಅಥವಾ ವಿಮುಕ್ತರು ಆಥವಾ ಸಂತರು.


8 ಬಗೆಯ ಆರ್ಯರು ಅಥವಾ ವಿಮುಕ್ತರು ಆಥವಾ ಸಂತರು.


ಮೊದಲ ಫಲ - ಸೋತಾಪನ್ನ (ದ್ವೀತೀಯ ಆರ್ಯ)

ಆ ಜ್ಞಾನದ ನಂತರ 2 ಅಥವಾ 3 ಫಲಚಿತ್ತವು ಉದಯಿಸುತ್ತದೆ. ಅದು ಅದರ ಪರಿಣಾಮವಾಗಿದೆ. ಇವು ಆಸವಗಳ ನಾಶದಿಂದಾಗಿವೆ. ಕೆಲವರ ಪ್ರಕಾರ 1 ರಿಂದ 5 ಫಲಚಿತ್ತಗಳು ಬದಲಿಸುತ್ತದೆ. ಗೋತ್ರಭು ಜ್ಞಾನವು ಅನುಲೋಮ ಜ್ಞಾನದ ಪುನರಾವರ್ತನೆಯ ಅಂತ್ಯದಲ್ಲಿ ಆಗುತ್ತದೆ. ಹೀಗಾಗಿ ಕಡಿಮೆ ಎಂದರೂ 2 ಅನುಲೋಮ ಚಿತ್ತಗಳಿರಲೇಬೇಕು. ಕೇವಲ ಒಂದೇ ಪುನರಾವರ್ತನೆಯ ಅಂತ್ಯದಲ್ಲಿ ಆಗುತ್ತದೆ. ಹೀಗಾಗಿ ಕಡಿಮೆ ಎಂದರೂ 2 ಅನುಲೋಮ ಚಿತ್ತಗಳಿರಲೇಬೇಕು. ಕೇವಲ ಒಂದೇ ಪುನರಾವರ್ತನೆ ಮಾಡಲಾರದು ಮತ್ತು ಏಕ ಸರಣಿಯ ರಭಸಗಳು ಹೆಚ್ಚೆಂದರೆ 7 ರಭಸಚಿತ್ತವನ್ನು ಹೊಂದಿರುತ್ತದೆ. ಪರಿಣಾಮವಾಗಿ ಆ ಸರಣಿಯಲ್ಲಿ 2 ಅನುಲೋಮ ಮತ್ತು 1 ಗೋತ್ರಭು ಮತ್ತು ಮಾರ್ಗಚಿತ್ತವು ನಾಲ್ಕನೆಯದಾಗಿದ್ದು 3 ಫಲಚಿತ್ತವನ್ನು ಒಳಗೊಂಡಿರುತ್ತದೆ. ಆದ್ದರಿಂದಲೇ 2 ಅಥವಾ 3 ಫಲಚಿತ್ತವನ್ನು ಹೊಂದಿರುತ್ತದೆ ಎನ್ನಲಾಗಿದೆ.
ಈ ಹಂತದಲ್ಲಿ ಶ್ರೋತದಲ್ಲಿ ಪ್ರವೇಶಿಸುವವನನ್ನು 2ನೆಯ ಆರ್ಯ ಎನ್ನುತ್ತಾರೆ. ಆತನು ಎಷ್ಟೋ ನಿರ್ಲಕ್ಷಿಸುವಂತಹವನೇ ಆಗಲಿ ಆತನು 7 ಜನ್ಮಕ್ಕಿಂತ ಹೆಚ್ಚು ಜನ್ಮ ಪಡೆಯಲಾರ. ಅದಕ್ಕಿಂತ ಮುಂಚೆಯೇ ಆತನು ದುಃಖ ವಿಮುಕ್ತನಾಗುತ್ತಾನೆ.
ಫಲಚಿತ್ತದ ಅಂತ್ಯದಲ್ಲಿ ಆತನು ಭವಂಗವನ್ನು ಪ್ರವೇಶಿಸುತ್ತಾನೆ. ನಂತರ ಮನೋದ್ವಾರ ಅವಜ್ಜನ ಉದಯಿಸುವುದು. ಅದು ಭವಂಗವನ್ನು ತಡೆಮಾಡಿ ಮಾರ್ಗವನ್ನು ವೀಕ್ಷಿಸುವಂತೆ ಮಾಡುವುದು. ಅದು ಅಳಿದ ನಂತರ 7 ರಭಸಗಳ ಮಾರ್ಗ ಅವಲೋಕನ ಉದಯಿಸಬಹುದು. ನಂತರ ಮತ್ತೆ ಭವಂಗ... ಇತ್ಯಾದಿ ನಂತರ ಮತ್ತೆ ಪುನರ್ ಅವಲೋಕಿಸುತ್ತಾನೆ. ಹೀಗೆ ಆತನು ಮತ್ತೆ ಮತ್ತೆ ಮಾರ್ಗವನ್ನು ಮತ್ತು ಫಲವನ್ನು ಪುನರ್ ಅವಲೋಕಿಸಿದ ನಂತರ ಆತನಿಗೆ ಬಂಧನಗಳು ಕಡಿಯಲ್ಪಟ್ಟಿರುವುದು ಮತ್ತು ಉಳಿದಿರುವ ಬಂಧನಗಳು ಗೋಚರಿಸುತ್ತದೆ ಮತ್ತು ಆತನು ನಿಬ್ಬಾಣವನ್ನು ವೀಕ್ಷಿಸುತ್ತಾನೆ.
ಸೋತಾಪನ್ನಾನಿಗೆ 5 ರೀತಿಯ ಪುನರ್ ಅವಲೋಕನವಿದೆ. ಹಾಗೆಯೇ ಸಕದಾಗಾಮಿ ಮತ್ತು ಅನಾಗಾಮಿಗಳನ್ನು ಸದಾ ಪುನರ್ ಅವಲೋಕನವಿದೆ. ಆದರೆ ಅರಹಂತರಿಗೆ ಯಾವ ಪುನರ್ ಅವಲೋಕನವಿಲ್ಲ. ಏಕೆಂದರೆ ಅವರಲ್ಲಿ ಯಾವ ಬಂಧನವಾಗಲಿ ಅಥವಾ ಕಶ್ಮಲಗಳಾಗಲಿ ಇರುವುದಿಲ್ಲ. ಒಟ್ಟು ಗರಿಷ್ಠ 19 ಪುನರ್ ಅವಲೋಕನಗಳಿರುತ್ತದೆ.
ಸಮುದ್ರದಲ್ಲಿ ರಾತ್ರಿ ಪ್ರಯಾಣ ಮಾಡುವ ಪ್ರಯಾಣಿಕನು ದೂರದಿಂದ ಭೂ ಪ್ರದೇಶದ ಬೆಳಕನ್ನು ಕಂಡು ಮರೆಯಾದಂತೆ ಧ್ಯಾನಿಗೆ ಇಲ್ಲಿ ನಿಬ್ಬಾಣದ ದರ್ಶನವಾಗುತ್ತದೆ. ಮೊದಲಬಾರಿಗೆ ನಿಬ್ಬಾಣ ಸಾಕ್ಷಾತ್ಕರಿಸುವುದರಿಂದ, ನಿಬ್ಬಾಣದ ಹೊಳೆಯಲ್ಲಿ ಪ್ರವೇಶಿಸುವುದರಿಂದಾಗಿ ಆತನಿಗೆ ಸೋತಾಪನ್ನ ಎನ್ನುತ್ತಾರೆ.
ಈ ಹೊಳೆಯಲ್ಲಿ ಗೆದ್ದ ವಿಜಯಶಾಲಿ (ಸೋತಾಪನ್ನ) ಈಗ ಪ್ರಾಪಂಚಿಕನಲ್ಲ (ಪುತುಜ್ಜನ) ಬದಲಾಗಿ ಆರ್ಯನಾಗಿರುತ್ತಾನೆ (ಶ್ರೇಷ್ಠ).

ಆತನಲ್ಲಿ 3 ಸಂಕೋಲೆಗಳು ಕತ್ತರಿಸಲ್ಪಟ್ಟಿರುತ್ತದೆ. ಅವೆಂದರೆ :

1. ಸಕ್ಕಾಯದಿಟ್ಟಿ - ಅಂದರೆ ಆತ್ಮ ಇದೆ ಎನ್ನುವ ದೃಷ್ಟಿ ಮತ್ತು ಸಾವೇ ದೇಹದ ಕೊನೆ ಎಂಬ ದೃಷ್ಟಿಗಳು ನಾಶವಾಗುತ್ತದೆ.
2. ಸಂಶಯಗಳು - ತ್ರಿರತ್ನದಲ್ಲಿ ಮತ್ತು 3 ಕಾಲದಲ್ಲಿರುವ ಸಂಶಯಗಳೆಲ್ಲಾ ಆತನಲ್ಲಿ ನಾಶವಾಗುತ್ತದೆ.
3. ಸೀಲಬ್ಬತ ಪರಾಮಾಸ : ಅಂದರೆ ಮಿಥ್ಯಾ ಆಚರಣೆಗಳಿಗೆ ಮತ್ತು ಮಿಥ್ಯಾ ಸಮಾರಂಭಗಳಿಗೆ ಅಂಟಿರುವುದು.
ಇವೆಲ್ಲವೂ ಸೋತಾಪನ್ನಾನಲ್ಲಿ ಕತ್ತರಿಸಲ್ಪಟ್ಟಿರುತ್ತದೆ.
ಸೋತಾಪನ್ನರವರು ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ ಅಪಾರ ಅಚಲ ಶ್ರದ್ಧೆಯಿಂದ ಕೂಡಿರುತ್ತಾರೆ.
ಸೋತಾಪನ್ನರವರು ಎಂದಿಗೂ ಪಂಚಶೀಲವನ್ನು ಭಂಗ ಮಾಡುವುದಿಲ್ಲ ಮತ್ತು ಅವರು ಅಪಾಯ ಲೋಕಗಳಾವುದರಲ್ಲೂ ಜನಿಸುವುದಿಲ್ಲ ಮತ್ತು ಅವರು ಬೋಧಿಗೆ ವಾಲಿರುವುದರಿಂದಾಗಿ ಹೆಚ್ಚೆಂದರೆ 7 ಜನ್ಮಗಳನ್ನು ಹೊಂದಿರುತ್ತಾರೆ. ಅದರ ಒಳಗೆಯೇ ನಿಬ್ಬಾಣವನ್ನು ಪಡೆಯುತ್ತಾರೆ ಮತ್ತು ಅವರಿಗೆ 7 ಸಂಕೋಲೆಗಳು ಮಾತ್ರ ಉಳಿದಿರುತ್ತದೆ. ಮೆತ್ತಾ ಕರುಣೆಯಿಂದ ಕೂಡಿರುವ ಅವರು ಪರರನ್ನು ಸೋತಾಪನ್ನ ಮಾಡಲು ಸದಾ ಪ್ರಯತ್ನಶೀಲರಾಗಿರುತ್ತಾರೆ ಹಾಗು ಸೋತಾಪನ್ನರಲ್ಲಿ ಈ 5 ದೋಷಗಳು ಇರುವುದಿಲ್ಲ.
1. ಬೇರೆಯವರು ಬೋಧನೆ ಮಾಡಿದರೆ ಬೇಸರಪಡುವುದು (ಮಾಕ್ಕೋ)
2. ತನ್ನನ್ನು ಶ್ರೇಷ್ಠರಿಗೆ ಹೋಲಿಸಿಕೊಳ್ಳುವುದು (ಫಲಿಸೋ)
3. ಅಸೂಯೆ (ಇಸ್ಸಾ)
4. ಸ್ವಾರ್ಥ (ಮಚ್ಚರಿಯ)
5. ಮಾಯಾವಿಯತೆ (ಮಾಯಾ) ಅಂದರೆ ಮೋಸ, ವಂಚನೆ.

ದ್ವಿತೀಯ ಮಾರ್ಗದ ಜ್ಞಾನ - 3ನೆಯ ಆರ್ಯ :

ಇಲ್ಲಿ ಸೋತಾಪನ್ನರವರು ಪದೇ ಪದೇ ಮಾರ್ಗವನ್ನು ವೀಕ್ಷಿಸಿ, ಇಂದ್ರೀಯ ಭೋಗಗಳಾದ ಲೋಭವನ್ನು ಮತ್ತು ದ್ವೇಷವನ್ನು ಕ್ಷಯಿಸುತ್ತಾರೆ, ದುರ್ಬಲಗೊಳಿಸುತ್ತಾರೆ ಮತ್ತು ಅವರು ಇಂದ್ರೀಯಗಳನ್ನು, ಬಲಗಳನ್ನು ಸಪ್ತಬೋಧಿ ಅಂಗಗಳನ್ನು ಬಲಿಷ್ಠಗೊಳಿಸಿ, ಮತ್ತೆ ಪಂಚಖಂಧಗಳಲ್ಲಿ ತ್ರಿಲಕ್ಷಣ ವೀಕ್ಷಿಸುತ್ತಾ, ಜ್ಞಾನಗಳಲ್ಲಿ ವೃದ್ಧಿಯಾಗುತ್ತಾ ಮುಂದುವರೆಯುತ್ತಾರೆ. ನಂತರ ಸಂಖಾರಗಳಲ್ಲಿ ಉಪೇಖ್ಖಾ ತಾಳಿ ಅನುಲೋಮ ನ್ಯಾನ ಪಡೆದು, ಗೋತ್ರಭು ಜ್ಞಾನ ಉದಯಿಸುತ್ತದೆ. ನಂತರ ಸಕದಾಗಾಮಿ (ಒಮ್ಮೆ ಮಾತ್ರ ಹಿಂತಿರುಗುವವ) ಮಾರ್ಗವು ಉದಯಿಸುತ್ತದೆ. ಸಕದಾಗಾಮಿಯ ಮಾರ್ಗದ ಜ್ಞಾನವು ಸಿಗುತ್ತದೆ.

ದ್ವಿತೀಯ ಫಲ - 4ನೆಯ ಆರ್ಯ : ಸಕದಾಗಾಮಿ :

ಇಲ್ಲಿ ಫಲವಿನ್ಯಾನವನ್ನು ಹಿಂದಿನ ಪ್ರಕ್ರಿಯೆಯಂತೆಯೆ ಅಥರ್ೈಸಿಕೊಳ್ಳುವುದು ಮತ್ತು ಇಲ್ಲಿ ಸಕದಾಗಾಮಿಯು (ಒಮ್ಮೆ ಮರಳುವವ) 4ನೇಯ ಆರ್ಯನಾಗಿದ್ದಾರೆ. ಅವರು ದುಃಖವನ್ನು ಅಂತ್ಯ ಮಾಡಲು ಒಮ್ಮೆ ಮಾತ್ರ ಲೋಕಕ್ಕೆ ಹಿಂತಿರುಗುತ್ತಾರೆ.
ಮುಂದೆ ಬರುವಂತಹ ಪುನರ್ ಅವಲೋಕನವನ್ನು ಹಿಂದೆಯೇ ವಿವರಿಸಲಾಗಿದೆ.
ಸಕದಾಗಾಮಿತ್ವವು ಎರಡನೆಯ ಹಂತದ ಸಂತತ್ವವಾಗಿದೆ. ಇಲ್ಲಿ ಇವರಲ್ಲಿ ಕಾಮರಾಗ ಮತ್ತು ಪಟಿಘ (ದ್ವೇಷ) ಬಹುಪಾಲು ನಾಶವಾಗಿರುತ್ತದೆ. ಇವರಿಗೆ ಒಮ್ಮೆ ಮರಳುವವ ಎಂದು ಕರೆಯುತ್ತಾರೆ. ಏಕೆಂದರೆ ಇವರು ಮಾನವರಾಗಿ ಒಮ್ಮೆ ಮಾತ್ರ ಜನಿಸಿ ನಂತರ ಅರಹಂತರಾಗುತ್ತಾರೆ.

ತೃತೀಯ ಮಾರ್ಗದ ಜ್ಞಾನ - 5ನೆಯ ಆರ್ಯ :

ಈ ರೀತಿಯಾಗಿ ಪುನರ್ ಅವಲೋಕಿಸಿ ಇಲ್ಲಿ ಸಕಾದಗಾಮಿಯು ವಜರ್ಿಸುವ ಮಹತ್ಕಾರ್ಯದಲ್ಲಿ ತಲ್ಲೀನರಾಗುತ್ತಾರೆ. ಅವರು ದ್ವೇಷ ಮತ್ತು ಇಂದ್ರೀಯ ಸುಖಗಳಲ್ಲಿರುವ ಲೋಭವನ್ನು ಪೂರ್ಣವಾಗಿ ನಿಶ್ಶೇಶವಾಗಿ ಪರಿತ್ಯಜಿಸುತ್ತಾರೆ. ಅವರು ಪಂಚೇಂದ್ರಿಯಗಳನ್ನು, ಪಂಚಬಲಗಳನ್ನು ಮತ್ತು ಸಪ್ತಬೋಧಿ ಅಂಗಗಳನ್ನು ಒಟ್ಟುಗೊಳಿಸಿ ಪಂಚಖಂಧಗಳಲ್ಲಿ ತ್ರಿಲಕ್ಷಣ ಜ್ಞಾನ ಅರಿಯಲು ಪ್ರಾರಂಭಿಸುತ್ತಾರೆ ಮತ್ತು ನಿರಂತರ ಅಭಿವೃದ್ಧಿಪರ ಜ್ಞಾನಗಳನ್ನು ಅರಿಯುತ್ತಿರುತ್ತಾರೆ.
ಯಾವಾಗ ಅವರು ಈ ರೀತಿಯಾಗಿ ಮಾಡುವರೋ, ಅಗ ಸಂಖಾರಗಳಲ್ಲಿ ಉಪೇಕ್ಷೆ ತಾಳುತ್ತಾರೆ. ಅನುಲೋಮ ಜ್ಞಾನ ಮತ್ತು ಗೋತ್ರಭು ಜ್ಞಾನವು ಸಹಾ ಹಿಂದೆ ವಿವರಿಸಿದ್ದಂತೆಯೇ ಒಂದೇಬಾರಿ ಗಮನ ನೀಡಿದ್ದರಿಂದಾಗಿ ಉದಯಿಸುತ್ತದೆ. ಆಗ ಆನಾಗಾಮಿಯ ಮಾರ್ಗದ ಜ್ಞಾನವು ಗೋತ್ರಭು ಜ್ಞಾನದ ಹಿಂದೆಯೇ ಲಭಿಸುತ್ತದೆ. ಇದು ಅನಾಗಾಮಿ ಮಾರ್ಗದ ಜ್ಞಾನವಾಗಿದೆ.

ತೃತೀಯ ಫಲಜ್ಞಾನ - 6ನೆಯ ಉದಾತ್ತ ಪುರುಷ (ಆರ್ಯ) (ಅನಾಗಾಮಿ)

ಫಲಜ್ಞಾನವನ್ನು ಈ ಹಿಂದಿನಂತೆಯೇ ಆರ್ಥಮಾಡಿಕೊಳ್ಳಬೇಕು ಮತ್ತು ಈ ಸಂದರ್ಭದಲ್ಲಿ ಹಿಂತಿರುಗದವ (ಅನಾಗಾಮಿ)ಯ 6ನೇ ಆರ್ಯನೆಂದು ಕರೆಯುತ್ತಾರೆ. ಅವರ ಮರಣದ ನಂತರ ಯೋಗ್ಯ ಸ್ಥಳದಲ್ಲಿ ಹುಟ್ಟುತ್ತಾರೆ ಮತ್ತು ಅಲ್ಲಿ ಅವರು ಪೂರ್ಣವಾದ ಸಾಧನೆಯನ್ನು ಅಂದರೆ ಪೂರ್ಣ ಆರಿಹೋಗುವಿಕೆ ಪ್ರಾಪ್ತಿಮಾಡಿ ಮತ್ತೆ ಇಲ್ಲಿ ಬಾರದಂತಹ ಈ ಲೋಕಕ್ಕೆ ಬಾರದಂತಹ ಸ್ಥಿತಿಯನ್ನು ಪಡೆಯುತ್ತಾರೆ.
ಆನಾಗಾಮಿಗೆ ಎಂದಿಗೂ ಹಿಂತಿರುಗದವ ಎಂದು ಕರೆಯುತ್ತಾರೆ. ಏಕೆಂದರೆ ಇವರು ಎಂದಿಗೂ ಮತ್ತೆ ಮಾನವರಾಗಿ ಹುಟ್ಟುವುದಿಲ್ಲ. ಅವರು ಕೇವಲ ಶುದ್ಧವಾಸವೆಂಬ ಅರೂಪಲೋಕದಲ್ಲಿ ಜನಿಸಿ ಅಲ್ಲಿಂದಲೇ ಅರಹಂತರಾಗುತ್ತಾರೆ. ಇವರಲ್ಲಿ ಕಾಮರಾಗ ಮತ್ತು ದ್ವೇಷಿಗಳು (ಪುಟಿಘ) ಪೂರ್ಣವಾಗಿ ನಶಿಸಿರುತ್ತದೆ.
ಒಂದುವೇಳೆ ಗೃಹಸ್ಥರಲ್ಲಿ ಯಾರಾದರೂ ಅನಾಗಾಮಿಯಾದರೆ ಅವರು ಪೂರ್ಣ ಬ್ರಹ್ಮಚಾರಿಯಾಗಿ ಜೀವಿಸುತ್ತಾರೆ.
ಅರಹಂತರಾಗುವುದು ಅಷ್ಟು ಸುಲಭವಲ್ಲ
ಕೆಲವು ಭಿಕ್ಷುಗಳು, ಶೀಲವಂತರಾಗಿದ್ದರು, ಸಮಾಧಿವಂತರು ಆಗಿದ್ದರು. ಜೊತೆಗೆ ಅನಾಗಾಮಿಗಳಾಗಿದ್ದರು. ಅವರು ಅಷ್ಟಕ್ಕೆ ತೃಪ್ತರಾದರು. ಅವರು ಸುಲಭವಾಗಿ ಅರಹಂತತ್ವವನ್ನು ಪ್ರಾಪ್ತಿ ಮಾಡಬಹುದೆಂದು ನಂಬಿದ್ದರು. ಅವರು ಬುದ್ಧರನ್ನು ಕಾಣಲು ಹೋದರು. ಆಗ ಭಗವಾನರು ಅವರನ್ನು ಕೇಳಿದರು ಭಿಕ್ಷುಗಳೇ ನೀವು ಅರಹತ್ವ ಪ್ರಾಪ್ತಿ ಮಾಡಿ ಆಯಿತೆ? ಆಗ ಅವರು ನಾವು ಯಾವಾಗ ಬೇಕಾದರೂ ಅರಹತ್ವ ಪ್ರಾಪ್ತಿ ಮಾಡಬಲ್ಲೆವು, ನಾವು ಅಂತಹ ಸ್ಥಿತಿಯಲ್ಲಿದ್ದೇವೆ.
ಆಗ ಭಗವಾನರು ಅವರಿಗೆ ಈ ಗಾಥೆಯನ್ನು ನುಡಿದರು.
ಕೇವಲ ಶೀಲದಿಂದಾಗಲಿ, ತಪಚ್ಚರ್ಯೆಯಿಂದಾಗಲಿ, ಬಹು ಶ್ರುತ (ಬಹಳ ಕೇಳಿ ತಿಳಿದಿರುವುದರಿಂದಾಗಲಿ) ದಿಂದಾಗಲಿ, ಸಮಾಧಿ ಲಾಭದಿಂದಾಗಲಿ, ಅಥವಾ ಏಕಾಂತವಾಸದಿಂದಾಗಲಿ, ಅಲೌಕಿಕ ಸುಖದಿಂದಾಗಲಿ, ಓ ಭಿಕ್ಷುಗಳೇ, ನೀವು ತೃಪ್ತಿ ತಾಳದಿರಿ. ಅಸವ ಕ್ಷಯ (ಅರಹತ್ವದಲ್ಲಿ) ಪ್ರಾಪ್ತಿಯವರೆಗೂ ತೃಪ್ತರಾಗಬೇಡಿ.
ಅಲ್ಲಿಯವರೆಗೂ ನೀವು ಅರಹಂತರ ಪರಿಶುದ್ಧ ಸುಖ ಪಡೆಯಲಾರಿರಿ.

ನಾಲ್ಕನೆಯ ಮಾರ್ಗದ ಜ್ಞಾನ - 7ನೆಯ ಆರ್ಯ :

ಈ ರೀತಿಯಾಗಿ ಪುನರಾವಲೋಕಿಸಿ, ತಮ್ಮ ಪರಿತ್ಯಾಗದಲ್ಲಿ ಪ್ರಯತ್ನಶೀಲತೆ ಆರಂಭಿಸುತ್ತಾರೆ. ರೂಪ ಲೋಕದಲ್ಲಿ ಮತ್ತು ಅರೂಪ ಲೋಕದಲ್ಲಿ ಅವರಿಗೆ ಇರುವಂತಹ ರಾಗವನ್ನು ತೊಡೆದುಹಾಕುತ್ತಾರೆ. ಪರಿತ್ಯಾಗ ಮಾಡುತ್ತಾರೆ. ಅಹಂಕಾರವನ್ನು ತೊರೆಯುತ್ತಾರೆ, ಅವಿಶ್ರಾಂತಿಯ ಸ್ಥಿತಿಗೆ ಅತೀತವಾಗಿ ಗೆಲ್ಲುತ್ತಾರೆ ಮತ್ತು ಅಜ್ಞಾನದಿಂದ ಪೂರ್ಣವಾಗಿ ಮುಕ್ತರಾಗುತ್ತಾರೆ. ಕುಶಲಸ್ಥಿತಿಗಳಾದ ಪಂಚೇಂದ್ರಿಯಗಳನ್ನು ಪಂಚಬಲಗಳನ್ನು ಸಪ್ತಬೋಧಿ ಅಂಗಗಳನ್ನು ಒಗ್ಗೂಡಿಸಿ ಸಾಧನೆ ಮಾಡುತ್ತಾರೆ. ಮತ್ತೆ ಪಂಚಖಂಧಗಳಲ್ಲಿ ತ್ರಿಲಕ್ಷಣಗಳನ್ನು ಅರಿಯುತ್ತಾರೆ ಮತ್ತು ಎಲ್ಲಾ ಜ್ಞಾನಗಳನ್ನು ಪಡೆಯುತ್ತಾರೆ.
ಯಾವಾಗ ಅವರು ಹಾಗೆ ಮಾಡುತ್ತಾರೋ, ಸಂಖಾರಗಳಲ್ಲಿ ಉಪೇಖ್ಖಾ ಭಾವನೆ ತಾಳುತ್ತಾರೋ, ಅನುಲೋಮ ಜ್ಞಾನವನ್ನು ಪಡೆಯುತ್ತಾರೋ ಆಗ ಗೋತ್ರಭು ಜ್ಞಾನವು ಒಂದೇಬಾರಿಯ ಗಮನಗೊಡುವಿಕೆಗೆ ಉದಯಿಸುತ್ತದೆ. ನಂತರ ಅರಹಂತರ ಮಾರ್ಗವು ಉದಯಿಸುತ್ತದೆ. ಇದು ಅರಹಂತರ ಮಾರ್ಗದ ಜ್ಞಾನವಾಗಿದೆ.

ನಾಲ್ಕನೆಯ ಫಲ - 8ನೆಯ ಆರ್ಯರು (ಅರಹಂತರು) :

ಮಾರ್ಗ ಜ್ಞಾನದ ನಂತರ ಫಲಚಿತ್ತವನ್ನು ಹಿಂದಿನಂತೆಯೇ ಅರ್ಥಮಾಡಿಕೊಳ್ಳಬೇಕು ಮತ್ತು ಈ ಹಂತದಲ್ಲಿರುವ ಅರಹಂತರಿಗೆ 8ನೆಯ ಆರ್ಯರು ಎನ್ನುತ್ತಾರೆ. ಅವರು ಅಸವಗಳನ್ನು ನಾಶಪಡಿಸಿರುವ ಪರಮಶ್ರೇಷ್ಠರಾಗಿದ್ದಾರೆ. ಅವರು ಅಂತಿಮ ಶರೀರಧಾರಿಗಳಾಗಿದ್ದಾರೆ. ಅವರು ಹೊರೆಯನ್ನು ಇಳಿಸಿದವರಾಗಿದ್ದಾರೆ. ತಮ್ಮ ಅಂತಿಮ ಗುರಿಯನ್ನು ತಲುಪಿದವರಾಗಿದ್ದಾರೆ ಮತ್ತು ತಮ್ಮ ತಡೆಗಳನ್ನು, ಬಂಧನಗಳನ್ನು ನಾಶಪಡಿಸಿದವರಾಗಿದ್ದಾರೆ. ಮತ್ತು ಅವರು ತಮ್ಮ ಪರಮಾರ್ಥ ಜ್ಞಾನದಿಂದಾಗಿ ಸರಿಯಾಗಿ ಮುಕ್ತರಾಗಿದ್ದಾರೆ. ಅವರು ಶ್ರೇಷ್ಠಮಟ್ಟದ ಪೂಜೆಗೆ, ಆತಿಥ್ಯಕ್ಕೆ, ದಾನಕ್ಕೆ ಅರ್ಹರು ಆಗಿದ್ದಾರೆ ಮತ್ತು ದೇವತೆಗಳಿಂದಲೂ ಮತ್ತು ಜಗತ್ತಿನ ಎಲ್ಲಾ ಜೀವಿಗಳಿಂದಲೂ ಗೌರವ, ಪೂಜೆಗೆ ಅರ್ಹರಾಗಿದ್ದಾರೆ.
ಈ ರೀತಿಯಾಗಿ ಜ್ಞಾನದರ್ಶನ ವಿಶುದ್ಧಿಯು 4 ಮಾರ್ಗಗಳನ್ನು ಮತ್ತು 4 ಫಲಗಳನ್ನು ಒಳಗೊಂಡಿದೆ.
ಅರಹಂತರು ರೂಪ ರಾಗ, ಅರೂಪರಾಗಗಳಲ್ಲಿ (ಸಮಥಾ ಧ್ಯಾನದ ಮತ್ತು ಅರೂಪ ಧ್ಯಾನದ ಅವಸ್ಥೆಗಳಲ್ಲಿ) ಆಸಕ್ತಿ ಪೂರ್ಣವಾಗಿ ತೊರೆದಿರುತ್ತಾರೆ ಮತ್ತು ಅವರು ಅಹಂಕಾರ ವಿಶ್ರಾಂತಿರಹಿತತೆ ಮತ್ತು ಅಜ್ಞಾನವನ್ನು ಪೂರ್ಣ ನಾಶಮಾಡಿ ಅರಹಂತತ್ವ ಪ್ರಾಪ್ತಿ ಮಾಡಿರುತ್ತಾರೆ.
ಇವರಿಗೆ ಅಸೇಖ ಎನ್ನುತ್ತಾರೆ, ಅಂದರೆ ಅವರಿಗೆ ಯಾವ ಶಿಕ್ಷಣದ ಅಗತ್ಯವಿಲ್ಲ ಎಂದರ್ಥ. ಮಿಕ್ಕ ಆರ್ಯರಾದ ಸೋತಾಪನ್ನ ಸಕದಾಗಾಮಿ ಮತ್ತು ಅನಾಗಾಮಿಗಳಿಗೆ ಸೇಖರೆನ್ನುತ್ತಾರೆ. ಏಕೆಂದರೆ ಅವರಿಗೆ ಶಿಕ್ಷಣದ ಅಗತ್ಯವಿದೆ.
ಅರಹಂತರು ಪೂರ್ಣವಾಗಿ ಮುಕ್ತರಾಗಿರುತ್ತಾರೆ. ಅವರಿಗೆ ಜನ್ಮವಿರುವುದಿಲ್ಲ. ಅವರ ಹಳೆಯ ಬಂಧನಗಳೆಲ್ಲ ನಾಶವಾಗಿರುತ್ತದೆ ಮತ್ತು ಹೊಸ ಯಾವ ಬಂಧನವನ್ನು ಅವರು ಉಂಟುಮಾಡಲಾರರು. ಎಲ್ಲಾ ವಿಧವಾದ ಬಂಧನಗಳು, ಕ್ಲೇಶಗಳು, ತನ್ಹಾಗಳು ಅವರಲ್ಲಿ ನಾಶವಾಗಿರುತ್ತದೆ. ಅವರು ನಿರೋಧ ಸಮಾಪತ್ತಿಯನ್ನು ತಡೆರಹಿತವಾಗಿ ಏಳು ದಿನಗಳ ಕಾಲ ವಿಹರಿಸುತ್ತಾರೆ. ನಿರೋಧ ಸಮಾಪತ್ತಿ ಸ್ಥಿತಿಯಲ್ಲಿ ಅವರು ಪರಮಸುಖದಲ್ಲಿ ನೆಲೆಸುತ್ತಾರೆ. ಆಗ ಅವರಲ್ಲಿ ಉಸಿರಾಟ ನಿಂತಿರುತ್ತದೆ. ಎಲ್ಲಾರೀತಿಯ ಗ್ರಹಿಕೆ ಮತ್ತು ವೇದನೆಗಳು ಸಹಾ ನಿರೋಧಕ್ಕೆ ಒಳಪಟ್ಟಿರುತ್ತದೆ. ಅಂದರೆ ಗ್ರಹಿಕೆಯಾಗಲಿ ಅಥವಾ ವೇದನೆಯಾಗಲಿ ಉದಯಿಸುವುದೇ ಇಲ್ಲ.

ಮರಣದ ನಂತರ ಅರಹಂತರು :

ಅರಹಂತರಲ್ಲಿ ಎಲ್ಲಾರೀತಿಯ ಆಕಾರ (ದೇಹ), ವೇದನೆಗಳು, ಗ್ರಹಿಕೆಗಳು, ಸಂಖಾರಗಳು ಮತ್ತು ವಿನ್ಯಾನವು ಪರಿತ್ಯಜಿಸಲ್ಪಟ್ಟಿರುತ್ತದೆ, ಬುಡಮೇಲಾಗಿರುತ್ತದೆ, ತಾಳೆಮರದ ಕಾಂಡವನ್ನು ಕತ್ತರಿಸಿ ಮರ ಉರುಳಿಸಿ ಮತ್ತೆ ಆ ಮರವು ಚಿಗುರದಂತೆ ಪಂಚಖಂಧಗಳನ್ನು ಕತ್ತರಿಸಿರುತ್ತಾರೆ. ಆದ್ದರಿಂದ ಅರಹಂತರನ್ನು ಪರಿನಿಬ್ಬಾಣದ ನಂತರ ನೋಡಲಾಗುವುದಿಲ್ಲ.
ಅವರು ಇದ್ದಾರೆ, ಇಲ್ಲ, ಇದ್ದೂ ಇಲ್ಲ, ಇಲ್ಲದೆಯೇ ಇದ್ದಾರೆ ಎಂಬ ಯಾವ ತರ್ಕವೂ ಅವರಿಗೆ ಹೊಂದಿಕೆಯಾಗುವುದಿಲ್ಲ. ಕೇವಲ ಪರಿನಿಬ್ಬಾಣ ಪಡೆದಿದ್ದಾರೆ ಎಂದು ಹೇಳಬಹುದು. ಯಾವ ಯಾವುದರಿಂದ ಅವರನ್ನು ಗುತರ್ಿಸಬಹುದೋ ಅವ್ಯಾವುವೂ ಅಲ್ಲಿರುವುದಿಲ್ಲ. ಅಂದರೆ ದೇಹದಿಂದಾಗಲಿ, ಸಂವೇದನೆಗಳಿಂದಾಗಲಿ, ವ್ಯಕ್ತಿತ್ವದಿಂದಾಗಲಿ, ಸಮಾಧಿ ಸ್ಥಿತಿಗಳಿಂದಾಗಲಿ, ಪ್ರಜ್ಞೆಯಿಂದಾಗಲಿ ಯಾವುದೇ ಚಿತ್ತ ಮತ್ತು ಚೇತಸಿಕಾಗಳಿಂದಾಗಲಿ ಅವರನ್ನು ಗುತರ್ಿಸಲು ಅಸಾಧ್ಯ. ಅದ್ಯಾವುದೂ ಅಲ್ಲಿರುವುದಿಲ್ಲ. ಪರಿನಿಬ್ಬಾಣ ಪಡೆದಿದ್ದಾರೆ ಎಂದು ಮಾತ್ರ ಹೇಳಬಹುದು.

ಖೀಣಾಸವ ಅರಹಂತರಲ್ಲಿ 10 ಗುಣಗಳು ಇರುವುದಿಲ್ಲ.

1. ಅವರು ಜೀವಹತ್ಯೆ ಮಾಡುವುದಿಲ್ಲ
2. ಅವರು ತನಗೆ ಸೇರದಿರುವುದನ್ನು ಸ್ವೀಕರಿಸುವುದಿಲ್ಲ.
3. ಬ್ರಹ್ಮಚಾರಿಗಳಾಗಿರುತ್ತಾರೆ.
4. ಸುಳ್ಳಾಡುವುದಿಲ್ಲ
5. ಹಣವನ್ನು (ಐಶ್ವರ್ಯ) ಬಳಸುವುದಿಲ್ಲ
6. ಪಕ್ಷಪಾತದಿಂದ ಕೂಡಿರುವುದಿಲ್ಲ
7. ಲೋಭದಿಂದ ಕೂಡಿರುವುದಿಲ್ಲ
8. ದ್ವೇಷದಿಂದ ಕೂಡಿರುವುದಿಲ್ಲ
9. ಮೋಹದಿಂದ ಕೂಡಿರುವುದಿಲ್ಲ
10. ಭಯದಿಂದ ಕೂಡಿರುವುದಿಲ್ಲ


Saturday 21 April 2018

ಮೈತ್ರಿ, ಧ್ಯಾನ ಮತ್ತು ಎಚ್ಚರಿಕೆಯಲ್ಲಿ ನೆಲೆಗೊಳ್ಳುವಿಕೆ

ಮೈತ್ರಿ, ಧ್ಯಾನ ಮತ್ತು ಎಚ್ಚರಿಕೆಯಲ್ಲಿ ನೆಲೆಗೊಳ್ಳುವಿಕೆ

ಮೈತ್ರಿಯನ್ನು, ಕರುಣೆಯನ್ನು ಮುದಿತಾವನ್ನು ಹಾಗು ಉಪೇಕ್ಷವನ್ನು ಅಭಿವೃದ್ಧಿಗೊಳಿಸುವುದರಿಂದ ಅದರದೆ ವಿಶಿಷ್ಟ ಲಾಭ ಸಿಗುತ್ತದೆ.  ನಮ್ಮ ಅಭ್ಯುದಯದ ಸಾಮಥ್ರ್ಯದಂತೆ ನಮ್ಮ ದುಃಖವು ಕ್ಷೀಣವಾಗುತ್ತದೆ. ಹಾಗು ಪರರನ್ನು ನಾವು ದುಃಖದಿಂದ ಮುಕ್ತರಾಗಲು ಸಹಾಯ ಮಾಡಬಹುದು.
ಆದರೆ ಈ ದುಃಖವೇ ನಮಗೆ ಬೀಗದ ಕೈಯಾಗಿದೆ. ಬುದ್ಧರ ಬೋಧನೆಯಲ್ಲಿನ ಮೈತ್ರಿಯು ಕೇವಲ ಏನನ್ನೂ ಬೆಳೆಸುವಂತಹದಲ್ಲ, ಅಥವ ಅದು ಕೇಳಲು ಚೆನ್ನಾಗಿದೆ ಎಂದು ಅಥವಾ ಕುಟುಂಬದ ಮೌಲ್ಯವೆಂದಾಗಲಿ ಅಥವಾ ಸಂತುಷ್ಟತೆಯ ಯೋಚನೆಗಳಿಂದಾಗಲಿ ಅಲ್ಲ. ಈ ನಾಲ್ಕು ಬ್ರಹ್ಮವಿಹಾರಗಳು (ಪರಮ ದಿವ್ಯ ಸ್ಥಿತಿಗಳು) ಬುದ್ಧಭಗವಾನರ ನಾಲ್ಕು ಸತ್ಯಗಳಿಗೆ ಕೊಂಡೊಯ್ಯುವ ದಾರಿಯಾಗಿದೆ ಅದಕ್ಕೆ ತುಂಬ ಸಮೀಪವಾಗಿದೆ.
ಬುದ್ಧರ ಬೋಧನೆಯಲ್ಲಿ ದುಃಖವು ಈರೀತಿಯಿದೆ :
ಜನ್ಮ, ರೋಗ, ಮುಪ್ಪು, ಮರಣಗಳು ದುಃಖ,
ಶೋಕ, ನೋವು ಪಶ್ಚಾತ್ತಾಪ ಚಿಂತೆಗಳು ದುಃಖ
ಪ್ರಿಯರ ವಿಯೋಗ, ದುಃಖ
ಅಪ್ರಿಯದ ಆಗಮನ ದುಃಖ
ಒಟ್ಟಿನಲ್ಲಿ ದೇಹ ಮನಸ್ಸಿನ ಆಸಕ್ತಿಯೆ ದುಃಖ
ಈ ದುಃಖ ಅಥವಾ ಅತೃಪ್ತಿಕರವು ಬುದ್ಧಭಗವಾನರ ಅರ್ಥದಲ್ಲಿ ಪಾಪವೆಂದಲ್ಲ, ಆದರೆ ಅವು ಅಸುಖದೆಡೆಗೆ (ದುಃಖಕ್ಕೆ) ಕರೆದೊಯ್ಯುತ್ತದೆ.  ದುಃಖದ ನಾಶವನ್ನು ಮಾಡಬೇಕಾದರೆ, ದುಃಖದ ಸ್ವರೂಪವನ್ನು, ಅದರ ಉತ್ಪತ್ತಿಯನ್ನು, ಅದರ ನಿರೋಧವನ್ನು ಹಾಗು ಅದರ ಮಾರ್ಗವನ್ನು ಅರಿಯಬೇಕಾಗುತ್ತದೆ ಹಾಗು ಅದರಂತೆ ನಡೆಯಬೇಕಾಗುತ್ತದೆ.
ಇದರ ಪ್ರಧಾನ ಸಾಧನೆಯು ನಮ್ಮ ಮನಸ್ಸನ್ನು ಅಭಿವೃದ್ಧಿಗೊಳಿಸುವುದು ಮತ್ತು ಧ್ಯಾನದ ಮೂಲಕ ದುಃಖದ ಅಂತ್ಯಗೊಳಿಸುವುದು.
ಬೌದ್ಧರಲ್ಲಿ ಧ್ಯಾನವೆಂದರೆ ಕಠಿಣ ಚಿಂತನೆ (ಬಲಯುತ ಮಾನಸಿಕ ಸಂಘರ್ಷವಲ್ಲ)ಯಲ್ಲ. ಧ್ಯಾನದ ಅರ್ಥ ಶಾರೀರಿಕ ಹಾಗು ಮನಸ್ಸನ್ನು ಶಾಂತಗೊಳಿಸುವುದು ಹಾಗು ತನ್ನ ಆಂತರಿಕದ ಉತ್ಪತ್ತಿ ಹಾಗು ನಷ್ಟಗಳನ್ನು ಅರಿತು ನಿಸ್ಸಾರವನ್ನು ಮೀರಿ ಹೋಗುವುದು. 
ಅದರಲ್ಲಿ ಪ್ರಾಥಮಿಕವಾಗಿ ಉಸಿರಾಟ ಧ್ಯಾನ ಬರುತ್ತದೆ (ಪ್ರಾಣಾಯಮವಲ್ಲ). ಅದರಲ್ಲಿ ಮನಸ್ಸನ್ನು ಉಸಿರಿನ ಪ್ರವೇಶ ಹಾಗು ನಿರ್ಗಮನದ ಕಡೆಗೆ ಕೇಂದ್ರೀಕೃತಗೊಳಿಸಬೇಕಾಗುತ್ತದೆ. ನಂತರ ಹಾಗೆ ಮುಂದುವರೆದ ನಂತರ ಶಾರೀರದ ಹಾಗು ಮನಸ್ಸಿನ ಸೂಕ್ಷ್ಮಾತೀಸೂಕ್ಷ್ಮ ಕ್ರಿಯೆಗಳನ್ನು ಅರಿಯಬೇಕಾಗುತ್ತವೆ.
ಮೈತ್ರಿಯು ಧ್ಯಾನದ ಕ್ಷೇತ್ರದಲ್ಲಿ ಪ್ರಾಥಮಿಕ ಅವಸ್ಥೆಯಷ್ಟೆ. ಆದರೆ ಇದೇ ಪರಮೋತ್ತರ ಹಂತವಲ್ಲ. ಆದರೆ ಇದು ಅಲಕ್ಷ್ಯ ಮಾಡುವಂತಹುದು ಅಲ್ಲ. ಇದರಿಂದ ಶಾಂತತೆಯು ಆನಂದವು ಉಂಟಾಗಿ ಮುಖ್ಯವಾದ ಮಾನಸಿಕ ವಿಷವಾದ ಹಗೆತನ, ಹಿಂಸೆ, ಕೋಪಗಳನ್ನು ನಾಶ ಮಾಡುತ್ತದೆ. ಹಾಗು ಒಬ್ಬರು ಮಾನಸಿಕ ಸ್ಥಿತಿಗಳನ್ನು ಅರಿಯುತ್ತಾ ಅಂಟಿಕೊಳ್ಳುವಂತಹ ಮಹೋನ್ನತೆಗೇರುತ್ತಾನೆ.
ಮೈತ್ರಿಯಿಂದ ಸಾಮಾಜಿಕ ಲಾಭಗಳು ಆಗುವುದರ ಜೊತೆಗೆ ಸಾಧನೆಗಾರನಿಗೆ ಅಥವ ಸಾಧನೆಗಾತಿಗೆ ಮತ್ತು ಸರ್ವಜೀವಿಗಳ ದುಃಖದ ವಿಮುಕ್ತಿಯ ಮಾರ್ಗವು ಅರಿವಾಗುತ್ತದೆ. 

ಮೈತ್ರಿಧ್ಯಾನ

ಮೈತ್ರಿಧ್ಯಾನ


ಮೈತ್ರಿಯನ್ನು ಮೊದಲು ನಿಮ್ಮ ಮೇಲೆ ಪ್ರಸರಿಸಿಕೊಳ್ಳಿ. ನೀವು ನಿಮ್ಮ ಮೇಲೆ ಪ್ರೀತಿ (ಹಿತಭಾವ) ತಾಳದಿದ್ದರೆ ಪರರಿಗೆ ಹೇಗೆ ಪ್ರೀತಿಸಬಲ್ಲಿರಿ? ಆದ್ದರಿಂದ ಮೊದಲು ನಿಮಗೆ ನೀವು ಮಿತ್ರರಾಗಿ. ನಿಮ್ಮ ಮೇಲೆ ನೀವು ಅನಾರೋಗ್ಯಕರ ಪಾಪಯುತ ಕೀಳರಿಮೆ ಬೆಳೆಸಿಕೊಳ್ಳಬೇಡಿ.  ಮಾನವನ ಸ್ವರೂಪವು ಮಾನವನ ಸ್ವರೂಪವೇ. ಯಾರೊಬ್ಬರು ಪೂರ್ಣವಾಗಿ ಒಳ್ಳೆಯವರೆ ಅಲ್ಲ (ಬುದ್ಧ ಹಾಗು ಅರಹಂತರನ್ನು ಬಿಟ್ಟು). ಅಥವಾ ಯಾರು ಸಹಾ ಪೂರ್ಣವಾಗಿ ಪಾಪಿಗಳು ಅಲ್ಲ. ನೀವು ಏನಾದರೂ ತಪ್ಪು ಮಾಡಿದರೆ ನೀವು ಅದಕ್ಕೆ ಚಿಂತೆಪಟ್ಟು ನೀವು ಪಾಪಿಗಳಂತೆ ವ್ಯಕ್ತಿತ್ವ ನಿಮರ್ಾಣ ಮಾಡಬೇಕಾಗಿಲ್ಲ. ಬದಲಾಗಿ ಯೋಗ್ಯ ಅರಿವು ಪ್ರಾಪ್ತಿ ಮಾಡಿ ಸರಿಯಾದ ಅವಕಾಶದಲ್ಲಿ ನಿಮ್ಮನ್ನು ಬದಲಿಸಿಕೊಳ್ಳಿ. ನೀವು ಹಿಂದಿನದಕ್ಕೆ ಪಶ್ಚಾತ್ತಾಪ ಪಡಬೇಡಿ. ಭವಿಷ್ಯದ ಬಗ್ಗೆ ಚಿಂತೆಯು ಪಡಬೇಡಿ. ನಿಮ್ಮ ಆಂತರಿಕದ ಕಡೆ ನೋಡಿಕೊಳ್ಳಿ. ನಿಮ್ಮಲ್ಲಿರುವ ಕೀಳರಿಮೆ ಹಾಗು ಅಹಂಕಾರಗಳನ್ನು ನಾಶಮಾಡಿ. ನೀವು ಅಂತಹ ಸ್ಥಿತಿಯನ್ನು ತಲುಪಿ ಅಲ್ಲಿ ಕೆಟ್ಟ ಯೋಚನೆಗಳು ಉತ್ಪತ್ತಿಯೇ ಆಗದಿರಲಿ.
ನೀವು ಪರರಿಗೆ ನಿಮ್ಮಲ್ಲಿರುವುದನ್ನು ಮಾತ್ರ ಕೊಡಬಲ್ಲಿರಿ. ನೀವು ಅನುಭವಿಸಲಾಗದಂತಹುದು ನೀವು ಕೊಡಲಾರಿರಿ. ನಿಮ್ಮ ಮೇಲೆ ಮೈತ್ರಿಯನ್ನು ಪ್ರಸರಿಸಿದಲ್ಲಿ ನಿಮ್ಮ ಯೋಗ್ಯತೆ ಏರುತ್ತದೆ. ನಿಮ್ಮ ಉನ್ನತಿಯ ಸಂತುಷ್ಟತೆಯ ಜೊತೆಯಲ್ಲೇ ಪರರ ಉನ್ನತಿಯಲ್ಲಿ ಆನಂದಿಸಿ ಹಾಗು ಮಾನವ ಕುಲಕ್ಕೆ ಸೇವೆಮಾಡಿ. ಎಂದೂ ನೀವು ನಿಮ್ಮನ್ನು ಅತ್ಯುತ್ತಮವಾಗಬಲ್ಲಿರಿ ಎಂದು ಅರಿಯಬಲ್ಲಿರೋ ಹಾಗೆಯೇ ಪರರು ಸಹಾ ಅತ್ಯುತ್ತಮತೆಯನ್ನು ಸಾಧಿಸಬಲ್ಲರು ಎಂದು ಸಹಾ ಅರಿಯುವಿರಿ.
ಮೈತ್ರಿಯು ಕೋಪಕ್ಕೆ ಅತ್ಯುತ್ತಮ ಔಷಧ. ಮೈತ್ರಿಯು ತಮ್ಮಲ್ಲೇ ಕೋಪಗೊಳ್ಳುವವರಿಗೆ ಔಷಧವೂ ಸಹ. ನಾವು ನಮ್ಮ ಮೈತ್ರಿಯನ್ನು ಎಲ್ಲ ಜೀವಿಗಳ ಮೇಲೆ ಸ್ವತಂತ್ರವಾಗಿ, ಅತೀಮವಾಗಿ, ಅಗಾಧವಾಗಿ ಪ್ರಸರಿಸೋಣ.
ಮೈತ್ರಿಯು ಸ್ಥಿರವಾದದ್ದು. ಆದರೆ ಹಿಡಿದುಕೊಂಡಿರುವಂತದಲ್ಲ (ಅಂಟಿಕೊಳ್ಳುವುದಿಲ್ಲ).
ಮೈತ್ರಿಯು ಅಚಲವಾದುದು, ಆದರೆ ಬಂಧನಯುತವಲ್ಲ.
ಮೈತ್ರಿಯು ಗಂಭೀರ ಸಭ್ಯವಾದುದು, ಕಠಿಣವಾದುದಲ್ಲ.
ಮೈತ್ರಿಯು ಸಹಾಯಕರವಾದುದು, ಆದರೆ ತಲೆಹಾಕುವುದಂತಹುದಲ್ಲ.
ಮೈತ್ರಿಯು ಶ್ರೇಷ್ಠವಾದುದು (ಗಂಭೀರ) ಆದರೆ ಅಹಂಕಾರರಹಿತವಾದುದು.
ಮೈತ್ರಿಯು ಕ್ರಿಯಾತ್ಮಕವಾದುದು, ನಿರಾಶಜನಕವಲ್ಲ (ಅಕ್ರಿಯಾತ್ಮಕವಲ್ಲ).
ದ್ವೇಷವು ಸಂಕುಚಿತಗೊಳಿಸುವಂತಹುದು, ಆದರೆ ಮೈತ್ರಿಯು ಸ್ವತಂತ್ರಗೊಳಿಸುವಂತಹುದು.
ದ್ವೇಷವು ದುಃಖವನ್ನುಂಟುಮಾಡುತ್ತದೆ, ಆದರೆ ಮೈತ್ರಿಯು ಶಾಂತಿ (ಆನಂದ)ಯನ್ನು ನೀಡುತ್ತದೆ.
ದ್ವೇಷವು ಉದ್ರೇಕಿಸುತ್ತದೆ, ಆದರೆ ಮೈತ್ರಿಯು ಪ್ರಶಾಂತತೆಯನ್ನು ನೀಡುತ್ತದೆ.
ದ್ವೇಷವು ಬೇರ್ಪಡಿಸುತ್ತದೆ. ಆದರೆ ಮೈತ್ರಿಯು ಒಂದಾಗಿಸುತ್ತದೆ.
ದ್ವೇಷವು ಅಡಚಣೆಯನ್ನುಂಟು ಮಾಡುತ್ತದೆ, ಆದರೆ ಮೈತ್ರಿಯು ಸಹಾಯ ಮಾಡುತ್ತದೆ.
ಮೈತ್ರಿಯು ಶ್ರೇಷ್ಠ ದೃಷ್ಟಿಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಚಿಂತನೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠವಾಚಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಕಾರ್ಯಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಜೀವನಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಪ್ರಯತ್ನಶೀಲತೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಎಚ್ಚರಿಕೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಸಮಾಧಿಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ನಮಗೆ ಪರಸ್ಪರ ಸೇವೆ ಮತ್ತು (ಆತಿಥ್ಯ) ದಾನ ಮನೋಭಾವದಿಂದಿರಿ ಎಂದು ಬೋಧಿಸುತ್ತದೆ. ಮೈತ್ರಿಯು ನಮಗೆ ಸಿಹಿಯಾಗಿ (ಪ್ರಿಯವಾಗಿ) ಮತ್ತು ಸರ್ವರೂ ಒಪ್ಪುವಂತಹ ನುಡಿಗಳನ್ನು ಆಡುವಂತೆ ತಿಳಿಸುತ್ತದೆ. ಮೈತ್ರಿಯು ನಮಗೆ ಪರಸ್ಪರ ಹೊಡೆದಾಡದೆ ಜಗಳವಾಡದೆ, ಪರಸ್ಪರ ಉನ್ನತಿಗೆ ಶ್ರಮಿಸುವಂತೆ ಬೋಧಿಸುತ್ತದೆ. ನಾವು ನಮ್ಮ ಮೈತ್ರಿಯನ್ನು ನಮಗೆ ದ್ವೇಷಿಸುವಂತವರ ಮೇಲೆಯೂ ಪ್ರಶಂಸಿಸುತ್ತೇವೆ. ನಮ್ಮ ಈಗಿನ ಶತ್ರು ನಮಗೆ ಹಿಂದಿನ ಜನ್ಮದಲ್ಲಿ ಒಮ್ಮೆ ತಾಯಿಯಾಗಿರಬಹುದು, ತಂದೆಯಾಗಿರಬಹುದು, ಸೋದರಿ ಅಥವಾ ಸೋದರಿಯಾಗಿರಬಹುದು. ಆದ್ದರಿಂದ ನಾವು ಇದನ್ನು ಚಿಂತಿಸಬೇಕು.
ಈ ವ್ಯಕ್ತಿಯು ಹಿಂದೆ (ಹಿಂದಿನ ಜನ್ಮದಲ್ಲಿ) ತಾಯಿಯಾಗಿರುವಾಗ ನನ್ನನ್ನು ಹೆತ್ತಳು. ತನ್ನ ಗರ್ಭದಲ್ಲಿ ಕಾಪಾಡಿಕೊಂಡಿದ್ದಳು. ನಾನು ಮಗುವಾಗಿದ್ದಾಗ ಆಕೆ ಅಸಹ್ಯವಿಲ್ಲದೆ ನನಗೆ ಶುಚಿಗೊಳಿಸಿದ್ದಾಳೆ. ಆಕೆ ನನ್ನೊಂದಿಗೆ ಆಟವಾಡಿದ್ದಾಳೆ. ಪಾಲನೆ ಮಾಡಿದ್ದಾಳೆ ಮತ್ತು ನನ್ನನ್ನು ತನ್ನ ಬಾಹುಗಳಲ್ಲಿ ಪ್ರೀತಿಯಿಂದ ಎತ್ತಿಕೊಂಡಿದ್ದಾಳೆ.
ಹಾಗೆ ನನ್ನನ್ನು ಆಳವಾದ ಪ್ರೀತಿಯಿಂದ (ವಾತ್ಸಲ್ಯ) ಸಲಹಿದ್ದಾಳೆ.  ಈ ವ್ಯಕ್ತಿಯು ಹಿಂದಿನ ಜನ್ಮದಲ್ಲಿ ನನಗೆ ತಂದೆಯಾಗಿರುವಾಗ, ಆತನು ನನಗಾಗಿ ಅತ್ಯಂತ ಶ್ರಮಪಟ್ಟು ಪ್ರಾಣವನ್ನು ಒತ್ತೆಯಿಟ್ಟು ಐಶ್ವರ್ಯ ದುಡಿದು ಸಲಹಿದ್ದಾನೆ. ನನಗೆ ಕ್ಷೇಮವನ್ನು ಕೊಟ್ಟಿದ್ದಾನೆ.
ನನಗೆ ಹಿಂದಿನ ಜನ್ಮಗಳಲ್ಲಿ ಇವರು ಸೋದರ, ಸೋದರಿ, ಮಗ ಅಥವಾ ಮಗಳು ಆಗಿದ್ದಾಗ ನನಗೆ ಮೈತ್ರಿಯಿಂದ ಕಂಡು, ಕಾಪಾಡಿ ಪ್ರತಿಕ್ಷಣದಲ್ಲೂ ನನ್ನ ಹಿತಕ್ಕಾಗಿ ಸಹಾಯಿಸಿದ್ದಾರೆ. ಆದ್ದರಿಂದ ನಾನು ಅವರ ಮೇಲೆ ಕೋಪಗೊಳ್ಳುವುದು ಅನ್ಯಾಯವಾಗುತ್ತದೆ. ಏಕೆಂದರೆ ಈ ಜನ್ಮದಲ್ಲಿ ಅವರು ಕ್ಷುಲ್ಲುಕವಾಗಿ ವತರ್ಿಸಿದ್ದಾರೆಂದು ಅವರು ಹಿಂದೆ ಮಾಡಿದ ಮೈತ್ರಿಯು ಮರೆಯಲಾರೆವು ಎಂದು ಚಿಂತಿಸಬೇಕಾಗುತ್ತದೆ.
ಕೋಪವು ಉತ್ಪತ್ತಿಯಾದಾಗ ನಾವು ಪ್ರತಿಯಾಗಿ ಅನಿತ್ಯತೆಯನ್ನು ಧ್ಯಾನಿಸಬೇಕಾಗುತ್ತದೆ ಹೀಗೆ :
ಆ ವ್ಯಕ್ತಿಯು ಈಗ ಪೂರ್ಣವಾಗಿ ಬದಲಿಸಿದ್ದಾನೆ, ದೇಹದಲ್ಲಿಯೂ ಹಾಗು ಮಾನಸಿಕವಾಗಿಯೂ. ನಾನು ಅಲ್ಲಿ ಯಾವುದರ ಮೇಲೆ ಕೋಪಗೊಳ್ಳಲಿ? ನಾನು ಉಗುರಿನ ಮೇಲೆ, ಕೂದಲಿನ ಮೇಲೆ, ಹಲ್ಲು ಅಥವಾ ಚರ್ಮದ ಮೇಲೆ ಕೋಪಗೊಳ್ಳಲೆ?
ಈ ವಿಧದಿಂದ ನಮಗೆ ಬೇರೊಬ್ಬನ ಮೆಲೆ ಕೋಪಿಸಿಕೊಳ್ಳಬಾರದು ಎಂದು ಅರಿವಾಗುತ್ತದೆ. ಆದರೆ ನಮ್ಮ ಯೋಚನೆಗಳು ಹಾಗು ವೇದನೆಗಳನ್ನು ಬದಲಿಸಬೇಕಾಗುತ್ತದೆ.  ಆದ್ದರಿಂದ ಮೈತ್ರಿಯನ್ನು ಮೊದಲು ನಮ್ಮ ಮೇಲೆ ಪ್ರಾರಂಭಿಸಿರಬೆಕು. ನೀವು ಹೀಗೆ ಧ್ಯಾನಿಸಿ :
ನಾನು ದುಃಖದಿಂದ ವಿಮುಕ್ತನಾಗಲಿ ಮತ್ತು ಸದಾ ಸುಖಿಯಾಗಿರಲಿ.
ನನ್ನ ಸುಖ ಕ್ಷೇಮ ಬಯಸುವ ಎಲ್ಲರೂ ಸಹಾ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ನನಗೆ ತಟಸ್ಥ (ಮಿತ್ರರೂ ಅಲ್ಲದೆ, ಶತ್ರುವು ಅಲ್ಲದೆ)ರಾಗಿರುವ ಎಲ್ಲರೂ ಸಹಾ ದುಃಖದಿಂದ ವಿಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ನನಗೆ ಯಾರು ದ್ವೇಷಿಸುವರೋ (ಶತ್ರು) ಅವರು ಸಹಾ ದುಃಖದಿಂದ ವಿಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಯಾರು ಈ ನಗರದಲ್ಲಿ ವಾಸಿಸುವರೋ ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಯಾರು ದೂರದಲ್ಲಿ (ಸುತ್ತಲಿನ ಸರ್ವರು) ವಾಸಿಸುತ್ತಿರುವರೋ ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಎಲ್ಲಾ ಜೀವಿಗಳು ಎಲ್ಲೇ ಇರಲಿ, ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳು ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ
ಇಡೀ ಬ್ರಹ್ಮಾಂಡ (ಪೂರ್ಣ ವಿಶ್ವ)ದಲ್ಲಿರುವ ಸಕಲ ಜೀವಿಗಳೂ ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ.
ಯಾವ ಯಾವ ಜೀವಿಗಳು ದುರ್ಬಲವಾಗಿವೆಯೋ, ಅಥವಾ ಬಲಿಷ್ಠವಾಗಿವೆಯೋ, ಸೂಕ್ಷ್ಮವಾಗಿವೆಯೋ ಅಥವಾ ಸ್ಥೂಲವಾಗಿವೆಯೋ, ಉದ್ಧವಾಗಿವೆಯೊ, ಅಗಲವಾಗಿವೆಯೋ, ಅಥವಾ ಮಧ್ಯಮ ಪ್ರಮಾಣದ್ದೂ. ಯಾವುವು ಕಣ್ಣಿಗೆ ಗೋಚರಿಸುವಂತಹುದೂ ಅಥವಾ ಅಗೋಚರವೋ, ಯಾವುವು ಹತ್ತಿರ ವಾಸಿಸುತ್ತಿವೆಯೋ ಅಥವಾ ದೂರ ವಾಸಿಸುತ್ತಿವೆಯೋ ಯಾವುವು ಜನ್ಮಿಸಿವೆಯೋ, ಅಥವಾ ಯಾವುದು ಜನ್ಮಿಸುವುವೋ ಅವೆಲ್ಲಾ ಜೀವಿಗಳೂ ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ. ಸುಖಕರ ಮನವನ್ನು ಹೊಂದುವಂತಾಗಲಿ.
ಯಾರೂ ಸಹ ಪರರಿಗೆ ವಂಚಿಸದಿರಲಿ, ಯಾರು ಯಾರಿಗೂ ಸಹಾ ಕೀಳಾಗಿ ಕಾಣದಿರಲಿ, ಕೋಪದಿಂದಾಗಲಿ ಅಥವಾ ದ್ರೋಹದಿಂದಾಗಲಿ, ಯಾರಿಗೂ ಸಹಾ ಹಿಂಸಾಯುತ (ಅಹಿತ)ವಾಗಿ ಯೋಚಿಸದಿರಲಿ.
ತಾಯಿಯೊಬ್ಬಳು ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಮಗುವನ್ನು ಹೇಗೆ ರಕ್ಷಿಸುವಳೊ, ಅದೇ ರೀತಿಯಾದ ಅಸೀಮ ಹೃದಯವನ್ನು ಸರ್ವಜೀವಿಗಳ ಮೇಲೆ ಬೆಳೆಸುವಂತಾಗಲಿ.
ಮೈತ್ರಿಯಿಂದ ಇಡೀ ಜಗತ್ತನ್ನೇ ಯಾವತಡೆ (ಅಪ್ರಿಯ)ವಿಲ್ಲದೆ ಮೇಲೆ, ಕೆಳಗೆ, ಸುತ್ತಲು (ಸೂರ್ಯನಂತೆ) ಪ್ರಸರಿಸಲಿ.
ಶ್ರೀಲಂಕ (ಸಿಂಹಳ)ದ ಸಂಪ್ರದಾಯದ ಮಂತ್ರವಂತೂ ಮೈತ್ರಿ ಸಾಧನೆಗೆ ಉತ್ತಮವಾದ ತಳಹದಿಯಾಗಿದೆ :
ಅಹಂ ಅವೇರೂ ಹೊಮಿ
ನಾನು ದ್ವೇಷದಿಂದ ಮುಕ್ತನಾಗಲಿ
ಅಬ್ಯಾಪಾಚ್ಚೊ ಹೊಮಿ
ನಾನು ಹಿಂಸೆ ಭಾವನೆಯಿಂದ ಮುಕ್ತನಾಗಲಿ
ಅನಿಘೋ ಹೊಮಿ
ನಾನು ಶಾರೀರಿಕ ಮತ್ತು ಮಾನಸಿಕ ಕ್ಲೇಷಗಳಿಂದ ಮುಕ್ತನಾಗಲಿ.
ಸುಖಿ ಅತ್ತನಂ ಪರಿಹರಾಮಿ
ನಾನು ನನ್ನ ಸುಖವನ್ನು ರಕ್ಷಿಸಿಕೊಳ್ಳಲಿ
ಸಬ್ಬೆ ಸತ್ತಾ ಅವೇರಾ ಹೊನ್ತು
ಸಬ್ಬೆ ಸತ್ತಾ ಅಬ್ಯಾಪಾಜೋ ಹೊನ್ತು
ಸಬ್ಬೆ ಸತ್ತಾ ಅನಿಪ್ಪೋ ಹೊನ್ತು
ಸಬ್ಬೆ ಸತ್ತಾ ಅತ್ತನಂ ಪರಿಹರಂತು
ಎಲ್ಲಾ ಜೀವಿಗಳೂ ದ್ವೇಷರಹಿತರಾಗಲಿ
ಎಲ್ಲಾ ಜೀವಿಗಳು ಹಿಂಸಾರಹಿತವಾಗಲಿ
ಎಲ್ಲಾ ಜೀವಿಗಳೂ ದುಃಖರಹಿತರಾಗಲಿ
ಎಲ್ಲಾ ಜೀವಿಗಳೂ ತಮ್ಮ ತಾವು (ಸುಖವನ್ನು) ರಕ್ಷಿಸಿಕೊಳ್ಳುವಂತಾಗಲಿ.
ಈ ಚಿಂತನೆಗಳು ಮತ್ತು ಧ್ಯಾನಗಳು ಬೌದ್ಧರ ಸಂಪ್ರದಾಯದಲ್ಲಿರು ವಂತಹುದು.
ನಾವು ಹೀಗೆ ಹೇಳಬಹುದು, ಏನೆಂದರೆ ಬೌದ್ಧರ ಶೀಲಕ್ಕೆ ಮೈತ್ರಿಯೇ ತಳಹದಿ. ಒಂದು ರೀತಿಯಲ್ಲಿ ಎಲ್ಲಾ ಮತಧರ್ಮಗಳು ಸಹಾ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಹಾಗು ಸುಖದ ಯೋಚನೆಗಳನ್ನು ಪ್ರಸರಿಸುತ್ತದೆ. ಆದ್ದರಿಂದ ಇದು ಕೇವಲ ಬೌದ್ಧರಿಗೆ ಸೀಮಿತವಾಗಿಲ್ಲ. (ಆದರೆ ಬೌದ್ಧರಲ್ಲೆ ಅದು ಪೂರ್ಣ ಪರಿಶುದ್ಧ, ಪರಿಪೂರ್ಣ ರೂಪದಲ್ಲಿದೆ)
ಆದರೆ ಬುದ್ಧರ ಹಾದಿಯನ್ನು ಹಿಂಬಾಲಿಸುವವರು ದುಃಖವನ್ನು ಅಂತ್ಯಗೊಳಿಸುತ್ತಾರೆ. ಮೈತ್ರಿ ಧ್ಯಾನವು ತಳಹದಿಯಷ್ಟೇ ಅಲ್ಲದೆ, ಎಚ್ಚರಗೊಳಿಸಿ ದುಃಖದಿಂದ ಮುಕ್ತರಾಗಲು ಸಹಾಯಿಸುತ್ತದೆ.
ನಾವು ನಿಮಗೆ ಈ ಕೆಳಕಂಡ ಪವಿತ್ರ ವಾಕ್ಯಗಳನ್ನು ನಿಮ್ಮ ದಿನಚರಿಯಿಂದ ಪ್ರಾರಂಭಿಸಿ ಇದನ್ನು ಧ್ಯಾನಿಸಿ ಎನ್ನುವೆವು.
ಕರುಣಯುತ ಪ್ರೀತಿಯು ಹಂಚಿಕೊಳ್ಳುವಿಕೆ
ನಾನು ಸುಖಿಯಾಗಿರಲಿ, ಕ್ಷೇಮವಾಗಿರಲಿ, ಶಾಂತವಾಗಿರಲಿ, ಹಾಗು ಉನ್ನತನಾಗಲಿ.
ನನಗೆ ಯಾವ ಹಾನಿಯು ಸಂಭವಿಸದಿರಲಿ.
ನನಗೆ ಯಾವ ಕಷ್ಟಗಳು ಬಾರದಿರಲಿ
ನನಗೆ ಯಾವ ತೊಂದರೆಗಳೂ ಬರದಿರಲಿ
ಮತ್ತು ನಾನು ಯಶಸ್ಸನ್ನು ತಲುಪಲಿ
ನಾನು ಸಹನೆಯುಳ್ಳವನಾಗಲಿ,
ಧೈರ್ಯವಂತನಾಗಲಿ, ಜ್ಞಾನಿ ಯಾಗು ದೃಢನಾಗಲಿ ಮತ್ತು ಎಲ್ಲಾ ಕಷ್ಟಗಳನ್ನು ತೊಂದರೆಗಳನ್ನು ಹಾಗು ಸೋಲುಗಳನ್ನು ದಾಟಿಹೋಗಲಿ.
ನನ್ನ ಪೋಷಕರು ಸುಖಿಯಾಗಿರಲಿ, ಕ್ಷೇಮವಾಗಿರಲಿ,
ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಆಗದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಗುರುಗಳು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಕುಟುಂಬವು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಮಿತ್ರರು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ಯಾರು ನನಗೆ ಮಿತ್ರರಲ್ಲವೋ ಅವರು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ಎಲ್ಲಾ ಜೀವಿಗಳೂ ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನಿಮ್ಮ ಧ್ಯಾನವನ್ನು ಮುಂದುವರಿಸಲು (ಅಭಿವೃದ್ಧಿಗೊಳಿಸಲು) ನೀವು ಈ ಮೇಲಿನ ಯೋಚನೆಯಲ್ಲಿ (ಭಾವನೆಯಲ್ಲಿ) ಮೈತ್ರಿಯಲ್ಲಿ ಮನಸ್ಸನ್ನು ನಿಲ್ಲಿಸಬೇಕು. ಹಾಗು ಪ್ರತಿಯೊಂದು ಜೀವಿಗೂ ಪ್ರತಿಯೊಂದು ದಿಕ್ಕಿಗೂ ಹರಡಬೇಕು.
ನಾವು ಎಲ್ಲಾ ಜನರು ಈ ಮೈತ್ರಿಯ ಧ್ಯಾನ, ಆದರಣೆಯಿಂದ ಲಾಭ ಪಡೆಯಲೆಂದು ಆಶಿಸುತ್ತೇವೆ ಮತ್ತು ಈ ಬೌದ್ಧರ ಹಾರೈಕೆಯ ಗಾಥೆಯಿಂದ ಮುಕ್ತಾಯ ಮಾಡುತ್ತೇವೆ.
ದುಃಖವು ಇದ್ದರೂ ದುಃಖಿತನು ಇಲ್ಲದಿರಲಿ,
ಭಯವಿದ್ದರೂ, ಭೀತಿಗೊಳ್ಳುವವನು ಇಲ್ಲದಿರಲಿ,
ಶೋಕವು ಇದ್ದರೂ, ಶೋಕಪಡುವವನು ಇಲ್ಲದಿರಲಿ,
ಎಲ್ಲಾ ಜೀವಿಗಳೂ ಕ್ಷೇಮವಾಗಿರಲಿ ಹಾಗು ಸುಖಿಯಾಗಿರಲಿ.

ಮೈತ್ರಿಯ 11 ಲಾಭಗಳು

ಮೈತ್ರಿಯ 11 ಲಾಭಗಳು

ಮೈತ್ರಿಯ ಲಾಭಗಳು
1. ಸುಖವಾಗಿ ನಿದ್ರಿಸುತ್ತಾನೆ (ಮಲಗಿದ ಒಂದೆರಡು ನಿಮಿಷದಲ್ಲೇ ನಿದ್ರೆ)
2. ಸುಖವಾಗಿ ಏಳುತ್ತಾನೆ (ಎದ್ದ ನಂತರ ಪ್ರಶಾಂತವಾಗಿ ಅಥವಾ ಆನಂದದಿಂದ ಇರುತ್ತಾನೆ)
3. ಕೆಟ್ಟ ಕನಸುಗಳನ್ನು ಕಾಣುವುದಿಲ್ಲ (ಸುಂದರವಾದ ಅತೀಂದ್ರಿಯ ಕನಸುಗಳು ಬೀಳಬಹುದು)
4. ಮನುಷ್ಯರಿಗೆ ಪ್ರಿಯನಾಗುತ್ತಾನೆ (ಜನಪ್ರಿಯ)
5. ಅಮನುಷ್ಯರಿಗೂ ಪ್ರಿಯವಾಗುತ್ತಾನೆ (ಪ್ರಾಣಿಗಳಿಗೆ ಮತ್ತು ಮುಂತಾದ ಜೀವಿಗಳಿಗೂ ಪ್ರಿಯನಾಗುತ್ತಾನೆ).
6. ದೇವ, ದೇವತೆಗಳಿಗೆ ಪ್ರಿಯನಾಗಿ ಅವರಿಂದ ರಕ್ಷಣೆ.
7. ಅಗ್ನಿ ವಿಷ ಮತ್ತು ಆಯುಧಗಳಿಂದ ಅಪಾಯವಿಲ್ಲ.
8. ಮನಸ್ಸು ಅತಿಬೇಗ ಏಕಾಗ್ರವಾಗುತ್ತದೆ.
9. ನಿಮ್ಮ ಮುಖಭಾವವು ಸುಂದರವಾಗುತ್ತದೆ ಮತ್ತು ಶಾಂತಿ ತೇಜಸ್ಸುಗಳಿಂದ ಕೂಡುತ್ತದೆ.
10. ಸಾಯುವಾಗ ಅಶಾಂತಿಯಿಂದ ಸಾಯುವುದಿಲ್ಲ.
11. ನಿಬ್ಬಾಣ ಪ್ರಾಪ್ತಿಗೆ ಸಹಾಯ. (ನಿಬ್ಬಾಣ ಪ್ರಾಪ್ತಿ ಇಲ್ಲವಾದರೆ ಬ್ರಹ್ಮ ಲೋಕ ಪ್ರಾಪ್ತಿ).

Sunday 18 March 2018

ನಿಬ್ಬಾಣ nibbana in kannada

 ನಿಬ್ಬಾಣ

ನಿಬ್ಬಾಣಂ ಪರಮ ಸುಖಂ
ನಿಬ್ಬಾಣವು ಸರ್ವರ ಅಂತಿಮ ಗುರಿಯಾಗಿದೆ. ಬುದ್ಧರ ಸರ್ವ ಬೋಧನೆಯು ಪೂರ್ಣವಾಗಿ ತರ್ಕಭರಿತವಾಗಿದ್ದರೂ ನಿಬ್ಬಾಣವು ಮಾತ್ರ ತಕರ್ಾತೀತವಾಗಿದೆ. ಇದು ಲೋಕೋತ್ತರ ಧಮ್ಮವಾಗಿದ್ದು, ಗೋತ್ರಭು ಜ್ಞಾನವು ಮಾತ್ರ ನಿಬ್ಬಾಣವನ್ನು ಅರಿಯುತ್ತದೆ. ನಿಬ್ಬಾಣವು ಅನಿವರ್ಾಚ್ಯವಾಗಿದೆ. ಇದು ಮಾತಿನಿಂದ ಆಗಲಿ, ಪದಗಳಿಂದಾಗಲಿ, ವಾಕ್ಯಗಳಿಂದಾಗಲಿ, ಗ್ರಂಥಗಳಿಂದಾಗಲಿ ವಿವರಿಸಲಾಗದು. ಅದು ದೇಹಕ್ಕೆ ಅತೀತ, ಮನಸ್ಸಿಗೂ ಅತೀತ, ಇಂದ್ರೀಯಗಳಿಗೂ ಅತೀತ, ಸಮಾಧಿ ಸ್ಥಿತಿಗಳಿಗೂ ಅತೀತವಾದುದು. ಸರ್ವಲೋಕಗಳಿಗೂ ಅತೀತವಾದುದು. ಅದು ಸ್ವತಃ ಅನುಭವಿಸುವಂತಹುದು ಸ್ವತಃ ಅರಿಯುವಂತಹುದು, ಪದಗಳಿಂದ ವಿವರಿಸಿದಷ್ಟು ಅದನ್ನು ತಪ್ಪಾಗಿ ಅಥರ್ೈಸಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ನಿಬ್ಬಾಣವನ್ನು ಲೋಕೋತ್ತರ ಮಾರ್ಗದಲ್ಲಿರುವವರು ಮಾತ್ರ ಸಾಕ್ಷಾತ್ಕರಿಸಬಹುದು.
ನಿಬ್ಬಾಣವನ್ನು ಶೂನ್ಯತಾ ಎನ್ನುತ್ತಾರೆ. ಏಕೆಂದರೆ ಇದು ಲೋಭ, ದ್ವೇಷ ಮತ್ತು ಮೋಹಗಳಿಂದ ಶೂನ್ಯವಾಗಿರುತ್ತದೆ. ಅಷ್ಟೇ ಅಲ್ಲ, ಸ್ಥಿತಿಗಳಿಗೆ ಅತೀತವಾಗಿರುತ್ತದೆ. ಅಂದರೆ ಎಲ್ಲಾ ಸ್ಥಿತಿಗಳಿಗೆ 3 ಅವಸ್ಥೆಗಳಿರುತ್ತದೆ. ಉದಯಿಸುವಿಕೆ, ಅಳಿಯುವಿಕೆ ಮತ್ತು ಬದಲಾಗುವಿಕೆ. ಆದರೆ ನಿಬ್ಬಾಣದಲ್ಲಿ ಈ 3 ಅವಸ್ಥೆಗಳಿರುವುದಿಲ್ಲ. ಆದ್ದರಿಂದ ಇದು ಸ್ಥಿತಿಗೆ ಅತೀತ ಶೂನ್ಯವಾಗಿದೆ. ನಿಬ್ಬಾಣವನ್ನು ನಿಮಿತ್ತರಹಿತ (ಅನಿಮಿತ್ತ) ಎನ್ನುತ್ತಾರೆ. ಏಕೆಂದರೆ ಲೋಭ ನಿಮಿತ್ತವಾಗಲಿ, ದ್ವೇಷ ನಿಮಿತ್ತವಾಗಲಿ, ಮೋಹ ನಿಮಿತ್ತವಾಗಲಿ ಯಾವುದೇ ನಿಮಿತ್ತಗಳು ಅಲ್ಲಿರುವುದಿಲ್ಲ. ನಿಬ್ಬಾಣವನ್ನು ಅಪ್ಪನಿಹಿತೊ ಅಂದರೆ ಆಸೆರಹಿತ ಎನ್ನುತ್ತಾರೆ. ಇದು ಎಲ್ಲಾರೀತಿಯ ಬಯಕೆಗಳಿಂದ ತನ್ಹಾಗಳಿಂದ, ಯೋಚನೆಗಳಿಂದ, ಗ್ರಹಿಕೆಗಳಿಂದ, ವೇದನೆಗಳಿಂದ ಮುಕ್ತವಾಗಿದೆ.
ನಿಬ್ಬಾಣವು ವೀಕ್ಷಿಸುವಂತಹುದ್ದಾಗಿದೆ, ನಿಬ್ಬಾಣವು ಅಮರವಾದುದು, ಆನಂತವಾದುದು, ಸ್ಥಿತಿಗೆ ಅತೀತವಾದುದು ಮತ್ತು ಅನುಪಮೇಯವು ಅನುತ್ತರವು ಆಗಿದೆ.
ಒಟ್ಟಾರೆ ಅದನ್ನು ಹೀಗೆ ವಿವರಿಸಬಹುದು.
ನಿಬ್ಬಾಣದ ನಕಾರಾತ್ಮಕ ವರ್ಣನೆ (ನಿಬ್ಬಾಣದಲ್ಲಿ ಏನಿಲ್ಲ?)
* ನಿಬ್ಬಾಣವು ಪೂರ್ಣವಾಗಿ ದುಃಖರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅಹಂರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಲೋಭರಹಿತವಾದುದು
ನಿಬ್ಬಾಣವು ಪೂರ್ಣವಾಗಿ ದ್ವೇಷರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಮೋಹರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಕಶ್ಮಲರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಜನ್ಮರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ತನ್ಹಾರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅಸ್ತಿತ್ವರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅರಚಿತವಾದುದು
* ನಿಬ್ಬಾಣವು ಅಭೂತವಾದುದು (ಅನುಪತ್ತಿ)
* ನಿಬ್ಬಾಣವು ಅಜಾತವಾದುದು (ಹುಟ್ಟಿಲ್ಲದ)
* ನಿಬ್ಬಾಣವು ಅಕತವಾದುದು (ಸ್ಥಿತಾತೀತವಾದುದು) (ಅವಸ್ಥೆಗೆ ಅತೀತ/ಗತಿಗೆ ಅತೀತ) (ಅನವಲಂಬಿತ/ಅಕಾರಣಿಯ)
* ನಿಬ್ಬಾಣವು ಜನ್ಮರಹಿತವಾದುದು
* ನಿಬ್ಬಾಣವು ಜರಾರಹಿತವಾದುದು
* ನಿಬ್ಬಾಣವು ಜರೆರಹಿತವಾದುದು
* ನಿಬ್ಬಾಣವು ಮರಣರಹಿತವಾದುದು
* ನಿಬ್ಬಾಣವು ಭಯರಹಿತವಾದುದು
* ನಿಬ್ಬಾಣವು ಉಪಾದಿರಹಿತವಾದುದು (ಬಂಧಗಳಿಲ್ಲದುದು).
* ನಿಬ್ಬಾಣದಲ್ಲಿ ಆತ್ಮವಿಲ್ಲ, ಜೀವಾತ್ಮವಿಲ್ಲ, ಪರಮಾತ್ಮವೂ ಇಲ್ಲ (ಏಕೆಂದರೆ ಇವೆಲ್ಲಾ ಕಲ್ಪಿತವಾಗಿದೆ)
* ನಿಬ್ಬಾಣದಲ್ಲಿ ದೇವರಿಲ್ಲ ಮತ್ತು ಇದು ದೇವರ ಜೊತೆ ಸಂಗಮವೂ ಅಲ್ಲ (ಇವೆಲ್ಲಾ ಕಲ್ಪಿತವಾಗಿದೆ)
* ನಿಬ್ಬಾಣದಲ್ಲಿ ಬ್ರಹ್ಮನಾಗಲಿ ಅಥವಾ ಪರಬ್ರಹ್ಮನಾಗಲಿ ಇಲ್ಲ (ಇವೆಲ್ಲದಕ್ಕಿಂತ ಅತೀತ ಸ್ಥಿತಿ).
* ನಿಬ್ಬಾಣವೆಂದರೆ ಮೃತ್ಯುವೂ ಅಲ್ಲ, ಶಾಶ್ವತವಾಗಿ ಇರುವುದೂ ಅಲ್ಲ.
* ನಿಬ್ಬಾಣವೆಂದರೆ ಸ್ವರ್ಗವಲ್ಲ, ಬ್ರಹ್ಮನೊಂದಿಗೆ ಐಕ್ಯವೂ ಅಲ್ಲ.
ನಿಬ್ಬಾಣದ ಸಕಾರಾತ್ಮಕ ವರ್ಣನೆ :
* ನಿಬ್ಬಾಣವು ಪರಮಸುಖಕರವಾದುದು
* ನಿಬ್ಬಾಣವು ಧ್ರುವವಾದುದು
* ನಿಬ್ಬಾಣವು ಶುಭವಾದುದು
* ನಿಬ್ಬಾಣವು ಕ್ಷೇಮಕರವಾದುದು
* ನಿಬ್ಬಾಣವು ಕೇವಲ (ಅದ್ವಿತೀಯವಾದುದು)
* ನಿಬ್ಬಾಣವು ಅಮರವಾದುದು
* ನಿಬ್ಬಾಣವು ಅನಂತವಾದುದು
* ನಿಬ್ಬಾಣವು ಅನುಪಮೇಯವಾದುದು
* ನಿಬ್ಬಾಣವು ಅನುತ್ತರವಾದುದು
* ನಿಬ್ಬಾಣವು ಪಾರವು (ಆಚೆಯದು)
* ನಿಬ್ಬಾಣವು ಪರ (ಪರಮಶ್ರೇಷ್ಟವಾದುದು)
* ನಿಬ್ಬಾಣವು ಪರಾಯಣವಾದುದು (ಶರಣು ಹೊಂದುವಂತಹದು)
* ನಿಬ್ಬಾಣವು ತಾಣ (ರಕ್ಷಿತವಾದುದು)
* ನಿಬ್ಬಾಣವು ಸಿವ (ಸುಖಕರವಾದುದು)
* ನಿಬ್ಬಾಣವು ಅನಾಲಯ (ಆಲಯವಿಲ್ಲದುದು/ನಿವಾಸವಿಲ್ಲದುದು)
* ನಿಬ್ಬಾಣವು ಅಕ್ಷರವಾದುದು (ನಾಶರಹಿತ)
* ನಿಬ್ಬಾಣವು ವಿಶುದ್ಧವಾದುದು (ಪರಿಪೂರ್ಣ ಪರಿಶುದ್ಧವಾದುದು)
* ನಿಬ್ಬಾಣವು ಲೋಕೋತ್ತರವಾದುದು (ಲೋಕಗಳಿಗೆ ಅತೀತವಾದುದು)
* ನಿಬ್ಬಾಣವು ಮುಕ್ತಿ
* ನಿಬ್ಬಾಣವು ವಿಮುಕ್ತಿ
* ನಿಬ್ಬಾಣವು ಶಾಂತಿ
* ನಿಬ್ಬಾಣವು ಪರಮಶಾಂತಿ
ಬುದ್ಧರಿಂದ ನಿಬ್ಬಾಣದ ವರ್ಣನೆ
ಓ ಭಿಕ್ಷುಗಳೇ, ಹುಟ್ಟಿಲ್ಲದ (ಅಜಾತ), ಉದಯರಹಿತವಾದ (ಅಭೂತ), ಅನಿಮರ್ಿತ (ಅಕತ) ಮತ್ತು ಸ್ಥಿತಿಯಿಲ್ಲದ/ಅಕಾರಣಿಯ/ಅನವಲಂಬಿತ (ಅಸಂಖತ)ವಾದ ಸ್ಥಿತಿಯೊಂದಿದೆ. ಓ ಭಿಕ್ಷುಗಳೇ ಒಂದುವೇಳೆ ಅಜಾತವಾದ, ಅಭೂತವಾದ, ಅಕತವಾದ, ಅಸಂಖತವಾದ ಈ ಸ್ಥಿತಿಯು ಇಲ್ಲದಿದ್ದರೆ ಹುಟ್ಟಿನಿಂದ, ಉದಯಿಸುವಿಕೆಯಿಂದ, ನಿಮರ್ಿತವಾದ, ಸ್ಥಿತಿಗಳಿಂದ ಮುಕ್ತರಾಗಲು ಸಾಧ್ಯವಿರುತ್ತಿರಲಿಲ್ಲ. ಹುಟ್ಟಿಲ್ಲದ, ಉದಯರಹಿತವಾದ ಅನಿಮರ್ಿತ, ಅನವಲಂಬಿತ ಸ್ಥಿತಿಯಿಲ್ಲದ ಸ್ಥಿತಿ ಇರುವುದರಿಂದಲೇ ಹುಟ್ಟಿನಿಂದ, ಉದಯಿಸುವಿಕೆಯಿಂದ ನಿಮರ್ಿತಗಳಿಂದ, ಸ್ಥಿತಿಗಳಿಂದ ಮುಕ್ತರಾಗಲು ಸಾಧ್ಯವಿದೆ.
ಎಲ್ಲಿ ಭೌತಿಕವು ಇಲ್ಲವೋ, ಮಾನಸಿಕತೆಯು ಇಲ್ಲವೋ, ಅದು ಈ ಲೋಕವು ಅಲ್ಲ, ಪರಲೋಕವೂ ಅಲ್ಲವೋ, ಇವೆರಡೂ ಅಲ್ಲವೋ, ಸೂರ್ಯನಾಗಲಿ, ಚಂದ್ರನಾಗಲಿ ಅಲ್ಲವೋ, ಎಲ್ಲಿ ಉದಯಿಸುವಿಕೆ ಇಲ್ಲವೋ, ಮುಂದುವರೆಯುವಿಕೆಯು ಇಲ್ಲವೋ, ನಿರಂತರತೆ ಇಲ್ಲವೋ, ಎಲ್ಲಿ ಸಾವಿಲ್ಲವೋ ಅಥವಾ ಪುನರ್ಜನ್ಮವಿಲ್ಲವೋ, ಯಾವುದಕ್ಕೂ ಆಧಾರವಾಗಿಲ್ಲವೋ, ಯಾವುದೋ ಬೆಳವಣಿಗೆಯಿಲ್ಲವೋ, ಯಾವುದೇ ಬೆಂಬಲವಿಲ್ಲವೋ ಇದೇ ದುಃಖದ ಅಂತ್ಯವಾಗಿದೆ, ನಿಬ್ಬಾಣವಾಗಿದೆ.
ಎಲ್ಲಿ ಯಾವುದು ಇಲ್ಲವೊ, ಎಲ್ಲಿ ಏನನ್ನು ಹಿಡಿಯಲಾರರೋ....
ವಿಮುಕ್ತ ಚಿತ್ತವು ಯಾವುದಕ್ಕೂ ಅಂಟಲಾರದು ಅಂದರೆ ನಿಬ್ಬಾಣ.
ಎಲ್ಲಿ ಪೃಥ್ವಿಯಿಲ್ಲವೋ, ಜಲವಿಲ್ಲವೋ, ಅಗ್ನಿಯಿಲ್ಲವೋ, ಗಾಳಿಯಿಲ್ಲವೋ ಅನಂತ ಆಕಾಶವಿಲ್ಲವೋ, ಅರಿವಿನ ಅನಂತತೆಯಿಲ್ಲವೋ, ಏನೂ ಇಲ್ಲವೆಂಬ ಸಮಾಧಿ ಸ್ಥಿತಿ ಅಲ್ಲವೋ, ಗ್ರಹಿಕೆಯಿಲ್ಲ, ಗ್ರಹಿಕೆಯಿಲ್ಲದೆಯೂ ಇಲ್ಲ ಅಲ್ಲವೋ, ಅದು ಈ ಲೋಕವಲ್ಲ, ಪರಲೋಕವೂ ಅಲ್ಲ. ಚಂದ್ರನೂ ಅಲ್ಲ, ಸೂರ್ಯನೂ ಅಲ್ಲ, ಅಲ್ಲಿ ಬರುವಿಕೆ ಆಗಲಿ, ಹೋಗುವಿಕೆಯಾಗಲಿ ಇಲ್ಲ. ಅಥವಾ ನಿಲ್ಲುವಿಕೆಯೂ ಅಲ್ಲ, ಅದಕ್ಕೆ ಯಾವುದೇ ಆಧಾರವಿಲ್ಲ, ಯಾವುದೇ ಬೆಂಬಲವಿಲ್ಲ. ಇದೇ ದುಃಖದ ಅಂತ್ಯವಾಗಿದೆ (ನಿಬ್ಬಾಣ).
ಹೇಗೆ ಜ್ವಾಲೆಯು ಆರಿಹೋದಾಗ, ಜ್ವಾಲೆಯನ್ನು ವಿವರಿಸಲಾಗದೋ ಅದೇರೀತಿಯಲ್ಲಿ ಅರಹಂತರು ನಾಮರೂಪಗಳಿಂದ ಮುಕ್ತರಾದಾಗ ಅವರನ್ನು ವಿವರಿಸಲಾಗುವುದಿಲ್ಲ.
...ಅವರನ್ನು ಅಳತೆ ಮಾಡಲು ಆಗುವುದಿಲ್ಲ, ಯಾವಾಗ ಎಲ್ಲವೂ ಹೋಗುತ್ತದೋ, ಆಗ ಎಲ್ಲಾರೀತಿಯ ಗುತರ್ಿಸುವಿಕೆಗಳೂ ಹೋಗುತ್ತದೆ.
ಯಾವಾಗ ಹಳೆಯ ಸ್ಥಿತಿಗಳೆಲ್ಲವೋ ಆಳಿಸಲಾಗಿದೆಯೋ ಮತ್ತು ಹೊಸದು ಉದಯಿಸಲಾರವೋ ಅಂತಹ ಚಿತ್ತಕ್ಕೆ ಮುಂದಿನ ಜನ್ಮವಿರಲಾರದು. ಬೀಜವು ಸುಟ್ಟು ಹಾಕಲ್ಪಟ್ಟಿದೆ. ತನ್ಹಾವು ಉದಯಿಸಲಾರದು, ಅಂತಹ ಜ್ಞಾನಿಗಳು ದೀಪದಂತೆ ಆರಿ (ನಂದಿ) ಹೋಗುತ್ತಾರೆ.
ಕಾಯವು ಚೂರಾಗಿ, ಗ್ರಹಿಕೆಯು ಅಳಿಸಿಹೋಗಿ, ವೇದನೆಗಳೆಲ್ಲವೂ ತಂಪಾಗಿ, ಸಂಖಾರವು ಉಪಶಮನ ಹೊಂದಿ ಇಲ್ಲವಾಗಿ, ವಿನ್ಯಾನವು ತನ್ನ ಕೊನೆಯನ್ನು ಮುಟ್ಟುತ್ತದೆ.
ಸಾರಿಪುತ್ತರ ಹೇಳಿಕೆ
ಲೋಭದ ನಾಶ, ದ್ವೇಷದ ನಾಶ ಮತ್ತು ಮೋಹದ ನಾಶ, ಮಿತ್ರನೇ ಇದೇ ನಿಬ್ಬಾಣವಾಗಿದೆ.
ನಿಬ್ಬಾಣದ ವಿಧಗಳು :
ಕಿಲೇಶ ಪರಿನಿಬ್ಬಾಣ ಮತ್ತು ಖಂದ ಪರಿನಿಬ್ಬಾಣ ಎಂದು ಎರಡು ವಿದಗಳಿವೆ.
ಕಿಲೇಶ ಪರಿನಿಬ್ಬಾಣ : ಕಿಲೇಶ (ಕ್ಲೇಷ) ಪರಿನಿಬ್ಬಾಣದಲ್ಲಿ ಅರಹಂತರ ರಾಗ, ದ್ವೇಷ ಮತ್ತು ಮೋಹಗಳು ನಾಶವಾಗುತ್ತದೆ, ಇನ್ನಿಲ್ಲವಾಗುತ್ತದೆ. ಮತ್ತೆ ಹುಟ್ಟುವುದಿಲ್ಲ. ಆದರೆ ಪಂಚಖಂಧಗಳು (ದೇಹ ಮತ್ತು ಮನಸ್ಸು) ಇರುತ್ತದೆ. ಅಂದರೆ ಮರಣದವರೆಗೂ ಇರುತ್ತದೆ. ಇದಕ್ಕೆ ಇನ್ನೊಂದು ಹೆಸರಿದೆ (ಸ. ಉಪಾದಿಸೇಸ ನಿಬ್ಬಾಣ) ಉಪಾದಿಗಳು (ಪಂಚಖಂಧಗಳು) ಶೇಷವಿರುವ ನಿಬ್ಬಾಣ ಎನ್ನುತ್ತಾರೆ. ಅಥವಾ ಪರಿನಿಬ್ಬಾಣ ಎನ್ನುತ್ತಾರೆ.
ಖಂದ ಪರಿನಿಬ್ಬಾಣ : ಖಂದ ಪರಿನಿಬ್ಬಾಣದಲ್ಲಿ ಅರಹಂತರು ತಮ್ಮ ಅಂತಿಮಾವಸ್ಥೆಯಲ್ಲಿ ಪಂಚಖಂಧಗಳನ್ನು ಬಿಟ್ಟುಬಿಡುತ್ತಾರೆ. ಅವು ನಾಶವಾಗುತ್ತವೆ, ಇನ್ನಿಲ್ಲವಾಗುತ್ತದೆ, ಮತ್ತೆ ಹುಟ್ಟಲಾರದು. ಅವರಲ್ಲಿ ಈ ಮೊದಲೇ ಕ್ಲೇಶಗಳು (ರಾಗ, ದ್ವೇಷ ಮತ್ತು ಮೋಹಗಳು) ನಾಶವಾಗಿರುತ್ತದೆ. ಈಗ ಪಂಚಖಂಧಗಳು ಇನ್ನಿಲ್ಲವಾಗುತ್ತವೆ. ಮತ್ತೆ ಉದಯಿಸಲಾರದು. ಇದಕ್ಕೆ ಇನ್ನೊಂದು ಹೆಸರೇ (ಅನುಪಾದಿಸೇಸ ನಿಬ್ಬಾಣ ಅಥವಾ ಪರಿನಿಬ್ಬಾಣ ಎನ್ನುತ್ತಾರೆ).
ನಿಬ್ಬಾಣ ಸಂಬಂಧ ಪಟ್ಟ ಪ್ರಶ್ನೆಗಳು ಮತ್ತು ಉತ್ತರಗಳು :
1. ನಿಬ್ಬಾಣವೆಂದರೆ ಶಾಶ್ವತವಾಗಿ ಇರುವಿಕೆಯೇ?
ಖಂಡಿತವಾಗಿ ಅಲ್ಲ, ಏಕೆಂದರೆ ನಾನು ಎಂಬುದೇ ಇಲ್ಲದಿರುವಾಗ ಇದು ಅನ್ವಯಿಸುವುದಿಲ್ಲ.
2. ಹಾಗಾದರೆ ಮೃತ್ಯುವೇ ? ನಶಿಸುವಿಕೆಯೇ ?
ಖಂಡಿತವಾಗಿ ಅಲ್ಲ. ಮೃತ್ಯುವೆಂದರೆ ತಾತ್ಕಾಲಿಕ ಜೀವನದ ತಾತ್ಕಾಲಿಕ ಕೊನೆಯಾಗಿದೆ. ಇಲ್ಲಿ ಇದು ಅಮರತ್ವ ಆಗಿರುವಾಗ ಮೃತ್ಯುವಾಗಲಿ, ನಶಿಸುವಿಕೆಯಾಗಲಿ ಇಲ್ಲ.
3. ನಿಬ್ಬಾಣವು ಇಲ್ಲವಾಗುವಿಕೆಯೇ ? ಶೂನ್ಯವೇ ?
ಆಕಾಶ ಮತ್ತು ನಿಬ್ಬಾಣಗಳೆರಡು ಧ್ರುವವಾದುದು ಮತ್ತು ಬದಲಾಗದ್ದು, ಇದು ಶಾಶ್ವತವಾದದ್ದು. ಏಕೆಂದರೆ ಇವು ಏನನ್ನೂ ಒಳಗೊಂಡಿಲ್ಲ. ಇವು ಕಾಲಾತೀತವಾದದ್ದು. ಆಕಾಶ ಇಲ್ಲದ ಸ್ಥಿತಿಯಾದರೆ, ನಿಬ್ಬಾಣ ಇದೆ, ಇಲ್ಲದಿದ್ದರೆ ಇರುವ ಸ್ಥಿತಿಗಳಿಂದ ಮುಕ್ತಿಯಾಗುತ್ತಿರಲಿಲ್ಲ. ಆದರೆ ಇದೆ ಎಂದು ಪಂಚಖಂಧಗಳನ್ನು, ಸಮಾಧಿ ಸ್ಥಿತಿಗಳನ್ನು ನೆನಪಿಸಿಕೊಂಡರೆ ಅದು ಇಲ್ಲವೆನ್ನಬೇಕಾಗುತ್ತದೆ.
4. ನಿಬ್ಬಾಣವು ಪರಮಸುಖ ಹೇಗೆ ?
ನಿಬ್ಬಾಣವು ಪರಮಸುಖ. ಹೇಗೆಂದರೆ ದುಃಖವು ಇಲ್ಲದಿರುವುದರಿಂದಾಗಿ, ಹೊರತು ಇಂದ್ರೀಯ ಸುಖಗಳಿಲ್ಲ, ಸಮಾಧಿ ಸುಖಗಳು ಅಲ್ಲ. ಅಷ್ಟೇ ಅಲ್ಲ, ಇದು ಅನುಭವಿಸುವಂತಹುದು ಅಲ್ಲ. ಅಂದರೆ ವೇದನೆಯಲ್ಲ, ವೇದನೆಗೆ ಅತೀತ ಸ್ಥಿತಿಯಾಗಿದೆ. ಅನುಭವಿಸಲಾರದ ಸ್ಥಿತಿಯಾಗಿದ್ದರಿಂದಲೆ ಇದು ಪರಮ ಸುಖವಾಗಿದೆ. ಅಷ್ಟೇ ಅಲ್ಲ, ಯಾವುದೆಲ್ಲವನ್ನು ನಾವು ಅನುಭವಿಸುವೆವೋ ಆ ಎಲ್ಲಾ ಸುಖಗಳು ದುಃಖವೆಂದು ಆರ್ಯರಿಂದ ಪರಿಗಣಿಸಲ್ಪಡುತ್ತದೆ.
5. ನಿಬ್ಬಾಣಕ್ಕೆ ನಾವು ನಾನು ಎಂದು ಅಥವಾ ಆತ್ಮ ಅಥವಾ ದೇವರು ಎಂದು ಕರೆಯಬಹುದೇ ?
ಖಂಡಿತವಾಗಿಯೂ ತಪ್ಪು. ಏಕೆಂದರೆ ನಾನು ಅಥವಾ ದೇವರು ಅಥವಾ ಆತ್ಮಗ್ರಹಿಕೆ ಮಾಡುವವರು ಪಕ್ಷಪಾತಿಗಳಾಗಿರುತ್ತಾರೆ. ಅವರು ನಿಜವಾದ ಸತ್ಯವೀಕ್ಷಕ ರಾಗಿರುವುದಿಲ್ಲ. ಅಂದರೆ ಅವರಲ್ಲಿ ಲೋಭ ಮತ್ತು ಮೋಹವಿರುತ್ತದೆ. ಅಂತಹವರಿಗೆ ನಿಬ್ಬಾಣವೇ ದೊರಕುವುದಿಲ್ಲ. ಅಂತಹ ಎಲ್ಲಾ ದೃಷ್ಟಿಗಳು ಸಂಶಯ ದಾಟುವ ವಿಶುದ್ಧಿಯಲ್ಲೇ ತಡೆಯಲ್ಪಡುತ್ತವೆ ಮತ್ತು ಸತ್ಯ ವೀಕ್ಷಣೆಯ ಬಗ್ಗೆ ಮಜ್ಜಿಮ ನಿಕಾಯ 1ನೇ ಸುತ್ತದಲ್ಲೇ ಬಹು ಚೆನ್ನಾಗಿ ವಿವರಿಸಲಾಗಿದೆ.
6. ನಿಬ್ಬಾಣ ಎಲ್ಲಿದೆ ?
ನಿಬ್ಬಾಣವು ಎಲ್ಲಿಯೂ ಇಲ್ಲ, ಅದನ್ನು ಯಾರು ಎಲ್ಲೇ ಇರಲಿ, ಶೀಲ, ಸಮಾಧಿ, ಪ್ರಜ್ಞಾ ಸ್ಥಾಪಿಸಿದಾಗ ಅದನ್ನು ಸಾಕ್ಷಾತ್ಕರಿಸಬಹುದು. ಹೇಗೆ ಜ್ವಾಲೆಯು ಎಲ್ಲಿಯೂ ಇರುವುದಿಲ್ಲವೋ ಬೆಂಕಿಕಡ್ಡಿ ಗೀರಿದಾಗ ಹುಟ್ಟುವುದೋ ಹಾಗೇ ಕೆಲವು ಅಗತ್ಯ ಸ್ಥಿತಿಗಳು ಪೂರೈಕೆಯಾದಾಗ ನಿಬ್ಬಾಣ ದಶರ್ಿಸಬಹುದು.
7. ನಿಬ್ಬಾಣವನ್ನು ಪ್ರಾಪ್ತಿ ಮಾಡುವುದು ಯಾವುದು?
ಈ ಪ್ರಶ್ನೆಯು ಪಕ್ಕಕ್ಕೆ ಇಡುವಂತಹದ್ದಾಗಿದೆ. ಏಕೆಂದರೆ ನಾನು, ನನ್ನದು, ನನ್ನ ಆತ್ಮ ಈ ಎಲ್ಲಾ ಭಾವನೆಗಳ ಸಂಶಯ ನಿವಾರಣೆಯದಾಗಲೇ ನಿಬ್ಬಾಣ ಪ್ರಾಪ್ತಿಯಾಗುವುದು ಆ ಅರ್ಥದಲ್ಲಿ. ನಾನು ಎಂಬುದು ಇಲ್ಲ. ಆತ್ಮ ಎಂಬುದು ಇಲ್ಲ. ಇವೆಲ್ಲ ಈ ಹಿಂದಿನ ಹಂತಗಳಲ್ಲಿ ವಿವರಿಸಲಾಗಿದೆ. ವ್ಯಾವಹಾರಿಕವಾಗಿ ಹೇಳಬೇಕಾದರೆ ಅರಹಂತರು ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಪಾರಮಾಥರ್ಿಕವಾಗಿ ಹೇಳಬೇಕಾದರೆ ನಿಬ್ಬಾಣವಿದೆ, ಆದರೆ ಮಾನವ ಅದರಲ್ಲಿ ಪ್ರವೇಶಿಸಲಾರ/ಹುಡುಕಲಾರ. ಮಾರ್ಗವಿದೆ, ಆದರೆ ಯಾವ ಪ್ರಯಾಣಿಕನಿಲ್ಲ ಎಂದು ಹೇಳಬೇಕಾಗುತ್ತದೆ.
8. ಪ್ರತಿಯೊಬ್ಬರ ಗುರಿ ನಿಬ್ಬಾಣವೇಕೆ ಆಗಬೇಕು?
ಇಲ್ಲಿ ಎಲ್ಲರಿಗೂ ನಿಬ್ಬಾಣ ಕಡ್ಡಾಯವಾಗಿ ಗುರಿ ಎಂದು ಹೇಳುತ್ತಿಲ್ಲ. ಅದು ವ್ಯಕ್ತಿಗತ ಸ್ವತಂತ್ರ್ಯವಾಗಿದೆ. ಯಾರು ಯಾವುದನ್ನು ಬೇಕಾದರೂ ಗುರಿ ಇಟ್ಟುಕೊಳ್ಳಬಹುದು. ಆದರೆ ಎಲ್ಲದರ ಪರಿಣಾಮ, ಫಲಿತಾಂಶ ಮೊದಲು ಸುಖ, ನಂತರ ದುಃಖ ಸಿಗುತ್ತಿರುತ್ತದೆ. ಅವರಿಗೆ ಅದೇ ಇಷ್ಟವಾದರೆ ನಮ್ಮ ಅಭ್ಯಂತರವೇನು ಇಲ್ಲ. ಆದರೆ ಪ್ರಜ್ಞಾವಂತರ ಗುರಿ ಮಾತ್ರ ನಿಬ್ಬಾಣ ಆಗಿರುತ್ತದೆ. ಏಕೆಂದರೆ ಅವರು ಪುನಃ ದುಃಖ ಜಾಲಕ್ಕೆ ಸಿಲುಕಲು ಇಚ್ಛಿಸುವುದಿಲ್ಲ.
ನಿಬ್ಬಾಣದ ವಿಷಯದಲ್ಲಿ ಗೊಂದಲ ಮೂಡದಿರಲು ಒಂದು ಸಣ್ಣ ಕಥೆ
ಸದಾ ನೀರಿನಲ್ಲಿದ್ದ ಮೀನಿಗೆ ಒಮ್ಮೆ ದೂರದ ಪ್ರಾಂತ್ಯದ ಆಮೆಯು ಸಿಗುತ್ತದೆ. ಆ ಆಮೆಯು ತಾನು ನೆಲದಿಂದ ಬಂದೆ ಎಂದು ಹೇಳುತ್ತದೆ.
ಮೀನು : ಆ ನೆಲವು (ಭೂಮಿ) ಹೇಗಿರುತ್ತದೆ ?
ಆಮೆ : ಅದು ಒಣಗಿರುತ್ತದೆ.
ಮೀನು : ಅಂದರೆ ಅದರ ಅರ್ಥವೇನು ?
ಆಮೆ : ಅಲ್ಲಿ ತೇವಾಂಶವಿರುವುದಿಲ್ಲ
ಮೀನು : ಅಂದರೆ ಅಲ್ಲಿ ತಂಪಿರುತ್ತದೆಯೆ?
ಆಮೆ : ಹೌದು ಮತ್ತು ಅಲ್ಲ
ಮೀನು : ಏನು ನೀನು ಹೇಳುತ್ತಿರುವುದು ಅಸಂಬದ್ಧವಾಗಿದೆ. ಅಲ್ಲಿ ಅಲೆಗಳಿವೆಯೇ?
ಆಮೆ : ಇಲ್ಲ ಅಲ್ಲಿ ಈಜಾಡುವುದು ಸಾಧ್ಯವಿಲ್ಲ
ಮೀನು : ಈಜಾಡಲು ಸಾಧ್ಯವಿಲ್ಲವೇ? ಅಂತಹುದು ಯಾವುದೂ ಇಲ್ಲ. ಅಲ್ಲಿ ಮೀನುಗಳು ಇವೆಯೇ ?
ಆಮೆ : ಇಲ್ಲ, ಪ್ರಾಣಿಗಳು ಇವೆ ಮತ್ತು ಕಟ್ಟಡಗಳಿವೆ, ಮಾನವರಿದ್ದಾರೆ.
ಮೀನು : ಅವೆಂದರೆ ಏನು? ಹೋಗಲಿ ನೆಲದಲ್ಲಿ ತಂಪಿದೆಯೆ, ಮೃದುತನವಿದೆಯೇ ಹೇಳು.
ಆಮೆ : ಇಲ್ಲ, ಒರಟುತನವಿದೆ, ಕೆಲವೊಮ್ಮೆ ತಂಪು, ಕೆಲವೊಮ್ಮೆ ಬಿಸಿಲು ಇರುತ್ತದೆ.
ಮೀನು : ನಾನು ನಂಬುವುದೇ ಇಲ್ಲ. ನೀನು ದೊಡ್ಡ ಸುಳ್ಳುಗಾರ. ನೀನು ನನಗೆ ಮಾತನಾಡಿಸಬೇಡ.
ಆಗ ಆಮೆಯು ಇದರ ಬಳಿ ಚಚರ್ೆಯೆ ವ್ಯರ್ಥ ಎಂದು ತಿಳಿದು ನೆಲದೆಡೆ ಹೊರಟಿತು.
ಹೀಗೆ ನಿಬ್ಬಾಣವು ಅನುಭವ ವೇದ್ಯ ಹೊರತು ಚಚರ್ೆಯ ವಿಷಯವಲ್ಲ. ಸಾಕ್ಷಾತ್ಕರಿಸುವ ವಿಷಯವಾಗಿದೆ 

Thursday 21 December 2017

ಆನಾಪಾನಾ ವೇದನಾನುಪಸ್ಸನಾ Anapana vedanaanupassana

                            ಆನಾಪಾನಾ ವೇದನಾನುಪಸ್ಸನಾ :

5. ಇಲ್ಲಿ ಸಾಧಕನು ಸುಶಿಕ್ಷಣ ಪಡೆದು ಹೀಗೆ ಅರಿತು ಸಾಧನೆ ಮಾಡುತ್ತಾನೆ. ನಾನು ಪೀತಿ (ಆನಂದ)ವನ್ನು ಅನುಭವಿಸುತ್ತಾ ಉಸಿರು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಇಲ್ಲಿ ಆನಂದವನ್ನು 2 ವಿಧದಲ್ಲಿ ಅನುಭವಿಸಬಹುದು.

1. ಧ್ಯಾನ ವಸ್ತು ವಿಷಯದಿಂದ (ಸಮಥದಿಂದ) 2. ಗೊಂದಲಾತೀತದಿಂದ (ವಿಪಶ್ಶನದಿಂದ) ಇಲ್ಲಿ ಧ್ಯಾನ ವಿಷಯದಿಂದ ಪ್ರಥಮ ಸಮಾಧಿ ಪ್ರಾಪ್ತಿಯಾದಾಗಿನಿಂದ ಆತನು ಆನಂದವನ್ನು ಅನುಭವಿಸಿರುತ್ತಾನೆ. ಇಲ್ಲಿ ಆತನು ಪ್ರಥಮ ಮತ್ತು ದ್ವಿತೀಯ ಧ್ಯಾನದಲ್ಲಿ ಅನುಭವಿಸಿದ ಆನಂದದಲ್ಲಿ ಅನಿತ್ಯತೆ ಕಾಣುತ್ತಾನೆ. ಹೀಗೆ ಆತನು ಗೊಂದಲಾತೀತನಾಗುತ್ತಾನೆ.
ಇಲ್ಲಿ ಆತನು 16 ರೀತಿಯಲ್ಲಿ ಆನಂದವನ್ನು ಉದಯಿಸುವಂತೆ ಮಾಡಬಹುದು. ಹೇಗೆಂದರೆ ಆತನು ಅನಾಪಾನಾಸತಿಯಲ್ಲಿ ಏಕಾಗ್ರತೆಯಿಂದ ಇದ್ದಾಗ, ಯಾವುದೇ ರೀತಿ ಭಂಗಬಾರದ ರೀತಿಯಲ್ಲಿ ಧ್ಯಾನಿಸುತ್ತಿರುವಾಗ ಅದನ್ನು (1) ಅರಿತಾಗ (2) ಗಮನಹರಿಸಿದಾಗ (3) ಗ್ರಹಿಸಿದಾಗ (4) ಸ್ಪಷ್ಟವಾಗಿ ನೋಡಿದಾಗ (5) ಪ್ರತಿಬಿಂಬಿಸಿದಾಗ (6) ನಿರ್ಧರಿಸಿದಾಗ (7) ಶ್ರದ್ಧೆಯಿಂದ ನಿರ್ಧರಿಸಿದಾಗ (8) ಪ್ರಯತ್ನಶೀಲದಿಂದ ಕೂಡಿದಾಗ (9) ಜಾಗ್ರತೆ ಸ್ಥಾಪಿಸಿದಾಗ (10) ಏಕಾಗ್ರತೆಯಲ್ಲಿ ನೆಲೆಸಿದಾಗ (11) ಪ್ರಜ್ಞೆಯಿಂದ ಅರಿತಾಗ (12) ಅಭಿಜ್ಞಾದಿಂದ ಕೂಡಿದಾಗ (13) ಯಾವುದನ್ನು ಅರಿಯಬೇಕೋ ಅದನ್ನು ಅರಿತಾಗ (14) ಯಾವುದನ್ನು ತ್ಯಜಿಸಬೇಕೋ ಅದನ್ನು ತ್ಯಜಿಸಿದಾಗ (15) ಯಾವುದನ್ನು ವೃದ್ಧಿಸಬೇಕೋ ಅದನ್ನು ವೃದ್ಧಿಸಿದಾಗ (16) ಯಾವುದನ್ನು ಸಾಕ್ಷಾತ್ಕರಿಸಬೇಕೋ ಅದನ್ನು ಸಾಕ್ಷಾತ್ಕರಿಸಿದಾಗ ಆನಂದ ಉದಯಿಸುತ್ತದೆ.
ಯಾವಾಗ ಆತನು ಸದಾ ಉದಾತ್ತವಾದ ಆನಂದದಿಂದ ಕೂಡಿರುವನೋ ಆಗ ಆತನಿಂದ ಯಾವುದೇ ಪಾಪ ಆಗುವುದಿಲ್ಲ. ಇದೇ ಆತನ ಶೀಲವಾಗಿರುತ್ತದೆ. ಆಗ ಆತನು ಅಭಂಗ ಏಕಾಗ್ರತೆಯಲ್ಲಿರುತ್ತಾನೆ. ಇದೇ ಆತನ ಸಮಾಧಿಯಾಗಿದೆ. ಈ ಆನಂದವು ಅನಿತ್ಯ, ಅನಾತ್ಮ ಎಂದು ಅರಿಯುತ್ತಾನೆ. ಇದೇ ಆತನ ಪ್ರಜ್ಞೆಯಾಗಿದೆ. ಹೀಗೆ ಆತನು ಸುಶಿಕ್ಷಣವನ್ನು ಪಡೆಯುತ್ತಾನೆ.

ಸಂಕ್ಷಿಪ್ತ ಆನಾಪಾನಾ ವೇದನಾನುಪಸ್ಸನಾ

. ಇಲ್ಲಿ ಸಾಧಕನು ಆನಂದವನ್ನು ಅರಿಯುತ್ತಾ ಅದರ ಅನಿತ್ಯತೆಯನ್ನು ಅರಿಯುತ್ತಾನೆ. ಅದು ಶಾಶ್ವತವಲ್ಲ ಎಂದು ಅರಿಯುತ್ತಾನೆ. ಆಗ ಆತನು ನಿತ್ಯವೆಂಬ ಗ್ರಹಿಕೆ (ನಿಚ್ಚ ಸನ್ಯಾ) ತ್ಯಜಿಸುತ್ತಾನೆ.
. ನಂತರ ವೇದನೆಗಳೆಲ್ಲವೂ ಅವು ಸುಖ ಪೂರ್ವಕವೇ ಆಗಿದ್ದರೂ ಜನ್ಮ ನೀಡುವುದರಿಂದ, ವಿಯೋಗವಾಗುವುದರಿಂದ ಮರೆಯಾಗುವುದರಿಂದಾಗಿ ಅವು ದುಃಖಕರ ಎಂದು ಅರಿತು ಸುಖವೆಂಬ ಗ್ರಹಿಕೆಯನ್ನು (ಸುಖಿ ಸನ್ಯಾ) ತ್ಯಜಿಸುತ್ತಾನೆ.
. ನಂತರ ಸಾಧಕನು ಯಾವುದೆಲ್ಲಾ ವೇದನೆಗಳು ಉದಯಿಸಿ ಮರೆಯಾಗುತ್ತವೆಯೋ ಮತ್ತು ದುಃಖಜಾತವು ಅಗಿರುವುದರಿಂದಾಗಿ ಅವು ನಾನಲ್ಲ, ನನ್ನದಲ್ಲ ಅವು ನನ್ನ ಆತ್ಮವಲ್ಲ ಎಂದು ಅರಿಯುತ್ತಾನೆ. ಈ ರೀತಿಯಾಗಿ ಆತನು ಆನಂದವೇ ನನ್ನ ಆತ್ಮ ಎಂಬ ಮಿಥ್ಯಾ ಗ್ರಹಿಕೆಯನ್ನು (ಅತ್ತಸನ್ಯಾ) ತೊರೆಯುತ್ತಾನೆ.
. ಹೀಗಾಗಿ ಆತನು ವೇದನೆಗಳಲ್ಲಿ (ಆನಂದದಲ್ಲಿ) ಯಾವ ಸುಖವನ್ನು ಪಡೆಯಲಾರ. ಆತನು ಆನಂದಿಸುವ ಪ್ರವೃತ್ತಿ ತೊರೆಯುತ್ತಾನೆ.
. ಹೀಗೆ ಆತನು ವಿರಾಗಿಯಾಗುತ್ತಾನೆ, ವೇದನೆಗಳಲ್ಲಿ (ಆನಂದದಲ್ಲಿ) ವಿರಾಗ ಭಾವನೆ ತಾಳುತ್ತಾನೆ, ಹೀಗಾಗಿ ಆತನು ಭಾವೋದ್ರೇಕಗಳನ್ನೆಲ್ಲಾ ತೊರೆಯುತ್ತಾನೆ.
. ನಂತರ ಆತನು ಈ ವೇದನೆಗಳ ಅಂತ್ಯ ಮಾಡಲು ನಿರ್ಧರಿಸುತ್ತಾನೆ (ನಿರೋಧ) ಮತ್ತು ಆತನಲ್ಲಿ ವೇದನೆಗಳು ಉದಯಿಸಲಾರವು. ಏಕೆಂದರೆ ಆತನು ಅವುಗಳ ಸಮುದಾಯ (ಉತ್ಪತ್ತಿ)ವನ್ನೇ ನಿಲ್ಲಿಸಿದ್ದಾನೆ. ಆತನಲ್ಲಿ ಈಗ ಸ್ಪರ್ಶವಾದರೂ ವೇದನೆಗಳು ಉಂಟಾಗುವುದಿಲ್ಲ.
. ಹೀಗೆ ಆತನು ವೇದನೆಗಳನ್ನು (ಆನಂದವನ್ನು) ತ್ಯಜಿಸುತ್ತಾನೆ. ಅವುಗಳಲ್ಲಿ ಅಂಟುವುದಿಲ್ಲ. ಅವುಗಳಿಗೆ ಅತೀತನಾಗುತ್ತಾನೆ. ಹೀಗೆ ಆತನು ಆನಂದದಲ್ಲಿ ಅನುಭವಿಸುತ್ತಾ ಉಸಿರಾಟದ ಧ್ಯಾನದಲ್ಲಿ ವಿಹರಿಸುತ್ತಾನೆ.

6. ಇಲ್ಲಿ ಸಾಧಕನು ಸುಶಿಕ್ಷಣ ಪಡೆದು ಹೀಗೆ ಅರಿತು ಸಾಧನೆ ಮಾಡುತ್ತಾನೆ. ನಾನು ಸುಖ (ದಿವ್ಯವಾದ ಸುಖ)ವನ್ನು ಅನುಭವಿಸುತ್ತಾ ಉಸಿರನ್ನು ಒಳ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಹೊರ ಬಿಡುತ್ತಿದ್ದೇನೆ.

ಆನಂದವು ಸ್ಥೂಲವಾದರೆ ಸುಖವು ಸೂಕ್ಷ್ಮವಾಗಿದೆ. ಆನಂದವನ್ನು ದ್ವಿತೀಯ ಧ್ಯಾನದವರೆಗೆ ಅನುಭವಿಸಿದರೆ, ಸುಖವನ್ನು ತೃತೀಯ ಧ್ಯಾನದವರೆಗೆ ಅನುಭವಿಸಬಹುದಾಗಿದೆ. ಅಷ್ಟೇ ಅಲ್ಲ, ಸುಖವನ್ನು ವಿಪಶ್ಶನ ಧ್ಯಾನದಲ್ಲಿಯೂ ಅನುಭವಿಸಬಹುದಾಗಿದೆ.
ಆನಂದದಂತೆ ಸುಖವನ್ನು ಸಹ 16 ವಿಧದಲ್ಲಿ ಉದಯಿಸಬಹುದಾಗಿದೆ ಮತ್ತು ಸದಾ ಸುಖ ಪೂರ್ವಕದಲ್ಲಿ ಇರುವವನಲ್ಲಿ ಶೀಲ, ಸಮಾಧಿ ಮತ್ತು ಪ್ರಜ್ಞಾವು ನೆಲೆಸಿರುತ್ತದೆ.
ಇಲ್ಲಿ ಸಾಧನೆಯೆಲ್ಲವೂ ಹಿಂದಿನ ಹಂತದಂತೆಯೇ ಅಂದರೆ ಆನಂದವನ್ನು ಅನುಭವಿಸಿದ ರೀತಿಯಲ್ಲಿಯೇ. ಆದರೆ ವ್ಯತ್ಯಾಸವಿರುವುದು ಕೇವಲ ಹಿಂದಿನ ಸಾಧನೆಗೆ ಆನಂದವು ವಸ್ತು ವಿಷಯವಾಗಿತ್ತು. ಇಲ್ಲಿ ಸುಖವು ವಸ್ತು ವಿಷಯವಾಗಿದೆ.

7. ಚಿತ್ತ ಸಂಖಾರಗಳನ್ನು ಅನುಭವಿಸುತ್ತಾ ನಾನು ಉಸಿರನ್ನು ಒಳ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಹೊರಬಿಡುತ್ತಿದ್ದೇನೆ. ಈ ರೀತಿ ಸುಶಿಕ್ಷಣ ಪಡೆದು ಆತನು ಸಾಧನೆ ಮಾಡುತ್ತಿರುತ್ತಾನೆ.

ಇಲ್ಲಿ ಸುಶಿಕ್ಷಣವೆಂದರೆ ಶೀಲ, ಸಮಾಧಿ, ಪ್ರಜ್ಞಾವೇ ಆಗಿದೆ. ಒಳ ಉಸಿರು, ಹೊರ ಉಸಿರಿನ ಜಾಗ್ರತೆಯೇ ಆನಾಪಾನಾಸತಿಯಾಗಿದೆ. ಇಲ್ಲಿ ಚಿತ್ತ ಸಂಖಾರಗಳನ್ನು ವೀಕ್ಷಿಸುವುದೇ ಪ್ರಜ್ಞಾವಾಗಿದೆ. ಇಲ್ಲಿ ಚಿತ್ತಸಂಖಾರಗಳೆಂದರೆ ವೇದನಾ ಮತ್ತು ಸನ್ಯಾ (ಸಞ್ಞಾ) ಆಗಿದೆ. ಈ ವೇದನಾ ಮತ್ತು ಸನ್ಯಾವು ಪಂಚಖಂಧಗಳಲ್ಲಿ ಎರಡಾಗಿದೆ. ಉಳಿದವುಗಳೆಂದರೆ ರೂಪ, ವಿನ್ಯಾನ, ಸಂಖಾರ.
ಇಂದ್ರಿಯ ಮತ್ತು ಇಂದ್ರೀಯಗಳ ಸ್ಪರ್ಶದ ನಂತರದ ಸ್ಥಿತಿಯೇ ವೇದನಾ ಆಗಿದೆ. ವೇದನೆಯೆಂದರೆ ಯಾವ ವೇದನೆಯೆಂದು ಪತ್ತೆಹಚ್ಚುವುದೇ ಸನ್ಯಾ (ಗ್ರಹಿಕೆ)ಯಾಗಿದೆ. ಹಾಗೆಯೇ ಮನಸ್ಸು ಮತ್ತು ಮನಸ್ಸಿನ ವಿಷಯಗಳು ಸಂಪಕರ್ಿಸಿದಾಗ ವೇದನೆ (ಸಂವೇದನೆ) ಉಂಟಾಗುತ್ತದೆ. ಧ್ಯಾನದಲ್ಲೂ ಕಾಯಾನುಪಸ್ಸನಾ ಮತ್ತು ವೇದನೆ ಆನಾಪಾನಾ ಮಾಡುವಾಗ ವೇದನೆಗಳು ಉಂಟಾಗುತ್ತದೆ. ಅವು ಮುಖ್ಯವಾಗಿ 3 ವಿಧವಾಗಿದೆ. ಪ್ರಿಯ (ಸುಖ) ವೇದನೆ, ದುಃಖ (ಅಪ್ರಿಯ) ವೇದನೆ ಮತ್ತು ಪ್ರಿಯ ಅಪ್ರಿಯವಲ್ಲದ (ಸುಖವೂ-ದುಃಖವೂ ಅಲ್ಲದ ವೇದನೆ) ವೇದನೆ. ಇವು ಯಾವ ವೇದನೆಯೆಂದು ಪತ್ತೆಹಚ್ಚುವುದೇ ಗ್ರಹಿಕೆಯಾಗಿದೆ.
ಧ್ಯಾನ ಆಳದಲ್ಲಿ ಸಂಖಾರಗಳು, ವಿನ್ಯಾನವು, ಯೋಚನೆಗಳು ಇರುವುದಿಲ್ಲ. ಆದರೆ ವೇದನೆ ಮತ್ತು ಸನ್ಯಾಗಳು ಇರುತ್ತದೆ. ಹೀಗಾಗಿ ಇವುಗಳ ವೀಕ್ಷಣೆಯೇ ಚಿತ್ತ ಸಂಖಾರಗಳ ವೀಕ್ಷಣೆ ಅಥವಾ ನಿಜವಾದ ವೇದನಾನುಪಸ್ಸನಾವಾಗಿದೆ. ಸನ್ಯಾವು ದೃಷ್ಟಿಗೆ (ಮಿಥ್ಯಾ ದೃಷ್ಟಿಗೆ) ಮೂಲವಾಗಿದೆ. ಉದಾಹರಣೆಗೆ : ಸುಂದರವಾಗಿದೆ ಎಂಬ ಶುಭದೃಷ್ಟಿ, ಸುಖವಾಗಿದೆ ಎಂಬ ಸುಖದೃಷ್ಟಿ, ಇದು ನಾನೇ ಎಂಬ ಆತ್ಮದೃಷ್ಟಿ, ಇದು ನಿತ್ಯ ಎಂಬ ನಿಚ್ಚ ದಿಟ್ಟಿ ಇವೆಲ್ಲವೂ ಗ್ರಹಿಕೆಯಿಂದಲೇ ಉಂಟಾಗುತ್ತದೆ. ಹಾಗೆಯೇ ಪ್ರಜ್ಞಾದಿಂದ ಅಶುಭಾ, ಅನಿತ್ಯಾ, ದುಃಖ ಮತ್ತು ಅನಾತ್ಮವು ಉಂಟಾಗುತ್ತದೆ.
ಇದು ಅಪ್ಪಟವಾದ ವಿಪಸ್ಸನಾ ಧ್ಯಾನವಾಗಿದೆ. ಇಲ್ಲಿ ಸಮಥದ ಪ್ರವೇಶವಿಲ್ಲವಾಗಿದೆ. ವೇದನಾದಿಂದ ಸನ್ಯಾವು ಉಂಟಾಗುತ್ತದೆ. ಹಾಗೆಯೇ ಸನ್ಯಾದಿಂದ ವೇದನಾವು ಸಹಾ ಉಂಟಾಗುತ್ತದೆ. ಸನ್ಯಾದಿಂದ ಮನೋಕ್ಲೇಶವಾದ ದಿಟ್ಟಿ ಉಂಟಾಗುತ್ತದೆ. ಆದರೆ ವೇದನಾದಿಂದ ಇಚ್ಛೆ ಉಂಟಾಗುತ್ತದೆ. ಈ ಇಚ್ಛೆಯೇ ಎಲ್ಲ ಕರ್ಮಗಳ ಮೂಲವಾಗಿದೆ. ಗ್ರಹಿಕೆ ಮತ್ತು ವೇದನೆಗಳು ಮನಸ್ಸಿಗೆ ಕಾರಣವಾಗಿದೆ ಹಾಗು ಸನ್ಯಾವು ಮಾತ್ರ ಮನಸ್ಸಿನ ಅಂತಿಮ ಸ್ಥಿತಿಯಾಗಿದೆ. ಇಲ್ಲಿ ಮತ್ತೊಮ್ಮೆ ವೇದನಾನುಪಸ್ಸನಾ ಆರಂಭವಾಗಬೇಕಾಗುತ್ತದೆ. ಇಲ್ಲಿ ಆನಂದವೇ ಆಗಿರಲಿ, ಸುಖವೇ ಆಗಿರಲಿ ಅದು ವೇದನೆಯೆಂದು ಪರಿಗಣಿಸಲ್ಪಡುತ್ತದೆ. ಅವುಗಳ ವೀಕ್ಷಣೆ ಇಲ್ಲಿ ಆಗುತ್ತದೆ. ಇಲ್ಲಿ ವೇದನೆಗಳ ಉದಯ, ಸ್ಥಾಪನೆ, ಅಳಿವು ಎಲ್ಲವನ್ನೂ ಸಾಧಕ ಅರಿಯುತ್ತಿರುತ್ತಾನೆ.

8. ಚಿತ್ತ ಸಂಖಾರಗಳನ್ನು ಶಾಂತಗೊಳಿಸುತ್ತ ನಾನು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಉಸಿರನ್ನು ಹೊರಬಿಡುತ್ತಿದ್ದೇನೆ ಎಂದು ಆತನು ಸುಶಿಕ್ಷಣ ಪಡೆದು ಸಾಧನೆ ಮಾಡುತ್ತಿರುತ್ತಾನೆ. 

ಇಲ್ಲಿ ಚಿತ್ತ ಸಂಖಾರಗಳಾದ ವೇದನೆ ಮತ್ತು ಗ್ರಹಿಕೆಗಳ ಕಡೆ ಕೇಂದ್ರೀಕರಿಸಿ ಆನಾಪಾನಾಸಾಧನೆ ಮಾಡುತ್ತಿರುತ್ತಾನೆ. ಆತನು ವೇದನೆಗಳಿಗೆ ಅನಿತ್ಯ, ಅತೃಪ್ತಿಕಾರಕ (ದುಃಖ) ಮತ್ತು ಅನಾತ್ಮ (ನಾನು ಅಲ್ಲ) ಕಂಡು ಆನಂದದಿಂದ ಮತ್ತು ಸುಖದಿಂದ ವಿಮುಖವಾಗುತ್ತಾನೆ. ಹಾಗೆಯೇ (ಮಿಥ್ಯಾ) ಸನ್ಯಾದಿಂದ ಅಂದರೆ ಶುಭ (ಸುಂದರ) ನಿತ್ಯ, ಸುಖ ಮತ್ತು ಇದೇ ನನ್ನ ಆತ್ಮ, ಇದೇ ನಾನು, ಇದೇ ನನ್ನದು ಎಂಬ ಗ್ರಹಿಕೆಗಳಿಂದ ಮುಕ್ತನಾಗುತ್ತಾನೆ. ವೇದನೆಗಳ ಮತ್ತು ಸನ್ಯಾಗಳ ಉದಯ ಹೇಗೆ ಆಗುತ್ತವೆ ಎಂಬುದನ್ನು ಅರಿಯುತ್ತಾನೆ. ಹಾಗೆಯೇ ಅವುಗಳ ಅಪಾಯ ಅರಿಯುತ್ತಾನೆ. ಅವುಗಳಲ್ಲಿ ಆಸಕ್ತಿ ಕ್ಷೀಣಿಸಿ ಅವುಗಳಲ್ಲಿ ಆನಂದಿಸದೆ, ವಿರಾಗಿಯಾಗಿ ವೇದನೆಗಳ ಉದಯವನ್ನೇ ತಡೆದು ಈ ರೀತಿಯಾಗಿ ವೇದನೆಗಳ ಅಂತ್ಯಹಾಡಿ ತ್ಯಜಿಸುತ್ತಾನೆ. ಇರುವ ವೇದನೆಗಳನ್ನು ನಿಲ್ಲಿಸುತ್ತಾನೆ. ಹೊಸದಾಗಿ ವೇದನೆ ಉದಯಿಸದಂತೆ ಮಾಡುತ್ತಾನೆ. ಸಮಚಿತ್ತತೆಯನ್ನು ವೃದ್ಧಿಸಿ ವೇದನಾ ಸಮಚಿತ್ತತೆ ಸಾಧಿಸುತ್ತಾನೆ.

ಆನಾಪಾನಾ ವಿಪಸ್ಸನ ಧ್ಯಾನ Anapana vipasana dhyana

                                     ಆನಾಪಾನಾ ವಿಪಸ್ಸನ ಧ್ಯಾನ 


ಆನಾಪಾನಸತಿ ಸುತ್ತದ ವಿವರಣೆ

ಆನಾಪಾನಾ ಕಾಯಾನುಪಶ್ಶನ :

ಭಿಕ್ಷುಗಳೇ, ಆನಾಪಾನಸತಿ ಸಾಧನೆ ಮಾಡಿದರೆ ಮತ್ತು ವೃದ್ಧಿಸಿದರೆ ಅಕುಶಲ ಚೇತಸಿಕಾಗಳನ್ನೆಲ್ಲಾ ಅದು ಉದಯಿಸುತ್ತಿದ್ದಂತೆ ಸ್ತಬ್ದಗೊಳಿಸಿ ಮರೆಮಾಡುತ್ತದೆ. ಆನಾಪಾನಸತಿಯು ಶಾಂತಿಯುತವಾದುದು ಮತ್ತು ಉದಾತ್ತವಾದುದು. ಇದು ಅಮಿಶ್ರಿತ ಆಹ್ಲಾದಕರ ವಿಹಾರವಾಗಿದೆ.
ಆನಾಪಾನಸತಿ ವೃದ್ಧಿಸಿದರೆ ಮತ್ತು ಸಾಧನೆ ಮಾಡಿದರೆ ಎಂದರೆ ಉಸಿರಾಟದ ಜಾಗರೂಕತೆಯಲ್ಲಿರುವ ಧ್ಯಾನ ಅಥವಾ ಉಸಿರಾಟದ ಧ್ಯಾನದಲ್ಲಿರುವ ಜಾಗರೂಕತೆ ಎಂದರ್ಥ. ಇದರಲ್ಲಿ ಪದೇ ಪದೇ ತಲ್ಲೀನನಾಗುವುದು ಎಂದು ಅರ್ಥವಾಗಿದೆ.
ಇದು ವೃದ್ಧಿಸಿದಾಗ ಅಕುಶಲ ಚೇತಿಸಿಕಾಗಳೆಲ್ಲಾ ಅದು ಉದಯಿಸುತ್ತಿದ್ದಂತೆ ಸ್ತಬ್ದಗೊಳಿಸಿ ಮರೆಯಾಗುತ್ತದೆ ಅಂದರೆ ಯಾವುದೆಲ್ಲವೂ ಅಕುಶಲ ಪ್ರವೃತ್ತಿಗಳು, ಯೋಚನೆಗಳು ಮತ್ತು ಅಕುಶಲ ಸ್ಥಿತಿಗಳು ಇವೆಯೋ ಒಂದೇಬಾರಿಗೆ ನಾಶಗೊಳ್ಳುತ್ತದೆ, ಸ್ತಬ್ದಗೊಳ್ಳುತ್ತದೆ. ಏಕೆಂದರೆ ಕುಶಲ ಚಿತ್ತಗಳ ಸಮಗ್ರತೆಯ ಪ್ರಶಾಂತತೆ ಅಷ್ಟು ಬಲಿಷ್ಠವಾಗಿರುತ್ತದೆ. ಅಷ್ಟು ಪರಿಣಾಮಕಾರಿಯಾದ ಕ್ರಿಯಾಶೀಲತೆ ಅಲ್ಲಿರುತ್ತದೆ.
ಆನಾಪಾನಸತಿಯು ಶಾಂತವಾದುದು ಮತ್ತು ಉದಾತ್ತವಾದುದು ಎಂದರೆ ಧ್ಯಾನದ ವಸ್ತುವಿನ (ವಿಷಯ) ಅರ್ಥದಲ್ಲಿ ಮತ್ತು ಧ್ಯಾನದ ಪರಿಣಾಮದ ಅರ್ಥದಲ್ಲಿ ಹೇಳಲಾಗಿದೆ. ಅಂದರೆ ಉದಾಹರಣೆಗೆ ಅಶುಭ ಧ್ಯಾನವೇ ತೆಗೆದುಕೊಳ್ಳಿ. ಅಲ್ಲಿ ಧ್ಯಾನದ ವಸ್ತುವು ಅಸಹ್ಯವಾಗಿರುತ್ತದೆ. ಕುರೂಪವಾಗಿರುತ್ತದೆ. ಆದರೆ ಪರಿಣಾಮ ಮಾತ್ರ ಅತ್ಯಂತ ಸುಲಾಭಕಾರಿಯಾಗಿದೆ. ಆದರೆ ಆನಾಪಾನಸತಿಯಲ್ಲಿ ಹಾಗಲ್ಲ, ಇಲ್ಲಿ ಧ್ಯಾನದ ವಿಷಯವು ಮತ್ತು ಪರಿಣಾಮವು ಶಾಂತವಾಗಿಯು ಇದೆ ಮತ್ತು ಉದಾತ್ತವಾಗಿಯು ಇದೆ. ಶಾಂತವೆಂದರೆ ಧ್ಯಾನದ ವಸ್ತುವು ಶಾಂತವಾಗಿ, ಸೂಕ್ಷ್ಮವಾಗಿ, ಸುಂದರವಾಗಿದೆ ಮತ್ತು ಶಾಂತತೆಯನ್ನು ನಿಮರ್ಿಸುತ್ತದೆ. ನಿಬ್ಬಾಣದ ಶಾಂತತೆಗೆ ಸಹಾಯಕಾರಿಯಾಗಿದೆ. ಹಾಗೆಯೇ ಶ್ರೇಷ್ಠ ಪರಿಣಾಮಗಳನ್ನು ನೀಡುವುದರಿಂದಾಗಿ ಉದಾತ್ತವಾಗಿದೆ. ಇದು ಅಮಿಶ್ರಿತ ಆಹ್ಲಾದಕರ ವಿಹಾರವಾಗಿದೆ ಎಂದರೆ ನಿಜಕ್ಕೂ ಕಸಿನಾಗಳಂತೆ ಅಥವಾ ಅಶುಭಾ ಧ್ಯಾನಗಳಂತೆ ಬಾಹ್ಯ ವಸ್ತುವಿನ ಅಗತ್ಯವಿಲ್ಲ. ಇದು ವಿಶೇಷವಾಗಿದೆ. ಯಾವುದೇ ದೇವರ ಜಪವಾಗಲಿ, ರೂಪ ಕಲ್ಪನೆಯಾಗಲಿ ಅಗತ್ಯವಿಲ್ಲ. ಆದ್ದರಿಂದ ಇದು ಅಮಿಶ್ರಿತವಾಗಿದೆ, ವಿಶಿಷ್ಟವಾಗಿದೆ. ಆಹ್ಲಾದಕರ ವಿಹಾರ ಎಂದರೆ ಇದರಿಂದ ದೊರಕುವ ಸಮಾಧಿಯ ಸ್ಥಿತಿಯು ಅತ್ಯಂತ ಆಹ್ಲಾದಕರ ಸುಖಗಳಿಂದ ಕೂಡಿರುವುದರಿಂದಾಗಿ ಅಂತಹುದರಲ್ಲಿ ವಿಹರಿಸುವುದರಿಂದ ಇದನ್ನು ಆಹ್ಲಾದಕರ ವಿಹಾರ ಎಂದು ಹೇಳುತ್ತಾರೆ.
ಇಲ್ಲಿ ಭಿಕ್ಷುವು (ಸಾಧಕ)... ಪದ್ಮಾಸನದಲ್ಲಿ ಆಸೀನನಾಗಿ, ದೇಹವನ್ನು ಸ್ಥಿರವಾಗಿಟ್ಟುಕೊಂಡು, ನೇರವಾಗಿಟ್ಟುಕೊಂಡು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಾನೆ.
ಅಂದರೆ ಇಲ್ಲಿ ಸಾಧಕನು ಪದ್ಮಾಸನದಲ್ಲಿ (ಸುಖಾಸನ) ದೇಹವನ್ನು ನೇರವಾಗಿಟ್ಟು ಒಳ ಉಸಿರು ಮತ್ತು ಹೊರ ಉಸಿರಿನಲ್ಲಿಯೇ ಜಾಗರೂಕತೆಯನ್ನು ಪ್ರತಿಷ್ಠಾಪಿಸಿ ಧ್ಯಾನಿಸುತ್ತಿರುತ್ತಾನೆ ಎಂದರ್ಥ.

ಹಂತ-1 : ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. 

ಅಂದರೆ ಇಲ್ಲಿ ಉಸಿರಾಟವು ಸಾಮಾನ್ಯವಾಗಿ ದೀರ್ಘವಾಗಿರಬಹುದು ಅಥವಾ ಓಡಿಬಂದು ಹಾಗೆಯೇ ಧ್ಯಾನಕ್ಕೆ ಕುಳಿತಿದ್ದರೆ ಆಗಲೂ ಉಸಿರಾಟ ದೀರ್ಘವಾಗಿರಬಹುದು ಅಥವ ಗಾಬರಿಯಿಂದ ಉಸಿರಾಟ ದೀರ್ಘವಾಗಿರಬಹುದು. ಅಂದರೆ ಉಸಿರನ್ನು ಕಿಬ್ಬೊಟ್ಟೆಯವರೆಗೆ ತೆಗೆದುಕೊಂಡಾಗ ಅದು ದೀರ್ಘ ಉಸಿರಾಟ ಎನಿಸುತ್ತದೆ. ಒಟ್ಟಿನಲ್ಲಿ ಉಸಿರಾಟ ಈ ರೀತಿಯ ದೀರ್ಘ ಉಸಿರಾಟವಿದ್ದಾಗ ಅದನ್ನು ಹಾಗೆಯೇ ಅದು ಇರುವ ಹಾಗೆ ಯತಾಭೂತವಾಗಿ ಹಾಗೆಯೇ ಅರಿಯುವುದು. ಆದರೆ ಯೋಚಿಸುವ ಹಾಗಿಲ್ಲ.
ಉಸಿರಾಟವು ಮೂಗಿನ ತುದಿಗೆ ಅಥವಾ ಮೇಲ್ತುಟಿಗೆ ಸ್ಪಶರ್ಿಸುತ್ತಿರುತ್ತದೆ. ಅಲ್ಲೇ ಅಬಾಧಿತ ಏಕಾಗ್ರತೆಯನ್ನು ನಿಲ್ಲಿಸಬಹುದು ಅಥವಾ ಕೆಲವು ಸಾಧಕರು ಕಿಬ್ಬೊಟ್ಟೆಯ ಮೇಲೆ ಮನಸ್ಸು ಕೇಂದ್ರೀಕರಿಸುತ್ತಾರೆ. ಪ್ರತಿ ಒಳ ಉಸಿರು ಮತ್ತು ಹೊರ ಉಸಿರಿಗೂ ಕಿಬ್ಬೊಟ್ಟೆ ಏರಿಳಿತ ಮಾಡುತ್ತಿರುತ್ತದೆ. ಅಲ್ಲೂ ಸಹ ಮನಸ್ಸು ಕೇಂದ್ರೀಕರಿಸಬಹುದು. ಆಗ ಉತ್ಸಾಹ ಉಂಟಾಗುತ್ತಿರುತ್ತದೆ. ಆನಂದ ಉಂಟಾಗುತ್ತಿರುತ್ತದೆ. ಅವನ್ನೆಲ್ಲಾ ವೃದ್ಧಿ ಮಾಡಬೇಕು. ಆದರೆ ಮೂಗಿನ ತುದಿ ಅಥವಾ ಕಿಬ್ಬೊಟ್ಟೆ ಎಲ್ಲೇ ಆಗಲಿ ಒಂದುಕಡೆ ಮಾತ್ರ ಏಕಾಗ್ರತೆ ಬೆಳೆಸಬೇಕು. ಎರಡುಕಡೆ ಬೆಳೆಸಿದರೆ, ಮನಸ್ಸು ಚದುರಿ ಅಶಾಂತತೆ ಉಂಟಾಗುತ್ತದೆ. ಮಿಕ್ಕ ಎಲ್ಲಾ ವಿಷಯಗಳಿಂದ ಮನಸ್ಸು ವಿಮುಖಗೊಳಿಸಬೇಕು. ಉಸಿರಾಟದ ಗಮನದ ವಿನಃ ಬೇರಾವ ಯೋಚನೆ ಇರಬಾರದು. ಮುಂದೆ ಸಾಧನೆ ಮುಂದುವರೆದಂತೆ ಜಾಗ್ರತಾ ಸ್ಥಿತಿಯು ಸಹಜವಾಗುತ್ತಾ ಹೋಗುತ್ತದೆ.

ಹಂತ-2 : ಉಸಿರಾಟವು ಕಿರಿದಾಗಿದ್ದಾಗ ನಾನು ಕಿರಿದಾಗಿ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಅರಿಯುತ್ತಿರುತ್ತಾರೆ. 

ಅಂದರೆ ಇಲ್ಲಿ ಉಸಿರಾಟ ಸಾಮಾನ್ಯವಾಗಿ ಕಿರಿದಾಗಿರಬಹುದು ಅಥವಾ ಇಲ್ಲಿ ಉಸಿರಾಟಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿಲ್ಲ ಅಥವಾ ಉಸಿರಾಟದ ಗಾತ್ರ ಕಿರಿದಾಗಿರಬಹುದು. ಅಂದರೆ ಬಲವಂತವಾಗಿ ಉಸಿರಾಟವನ್ನು ದೀರ್ಘ ಅಥವಾ ಕಿರಿದಾಗಿ ಮಾಡಬಾರದು. ಈ ರೀತಿ ಕಿರಿದಾಗಿ ಉಸಿರಾಟವು ನಡೆಯುತ್ತಿರುವಾಗ ದೇಹವು ಅತ್ಯಂತ ಸಮತೋಲನವಾಗಿ, ಸ್ಥಿರವಾಗಿರುತ್ತದೆ ಮತ್ತು ಅಲುಗಾಡುವುದಿಲ್ಲ. ಉಸಿರಾಟವನ್ನು ಆಡುತ್ತಿದ್ದರೂ ಸಹ ಅದರ ಚಲನೆಯನ್ನು ಬೇರೆಯವರು ಗಮನಿಸಲು ಆಗುವುದಿಲ್ಲ. ಅಂದರೆ ಎದೆ ಅಥವಾ ಕಿಬ್ಬೊಟ್ಟೆಯಲ್ಲಿ ಚಲನೆ ಕಾಣದ ರೀತಿ ನಡೆಯುತ್ತಿರುತ್ತದೆ. ಅದು ಹೇಗೇ ನಡೆಯುತ್ತಿರಲಿ ಅದನ್ನು ಹಾಗೆಯೇ ಗಮನಿಸುತ್ತಿರಬೇಕು. ಈ ಸ್ಥಿತಿಯಲ್ಲಿ ಯೋಚನೆಗಳು ನಿಂತಿರುತ್ತದೆ. ಭೂತಕಾಲದಲ್ಲಿಯಾಗಲಿ ಅಥವಾ ಭವಿಷ್ಯತ್ತಿನಲ್ಲಿ ಆಗಲಿ ಮನಸ್ಸು ಚಲಿಸುವುದಿಲ್ಲ.

ಹಂತ-3 : ಇಡೀ (ಉಸಿರಿನ) ದೇಹವನ್ನು ಅನುಭವಿಸಿ ನಾನು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಹೀಗೆ ಸುಶಿಕ್ಷಣ ಪಡೆದು ಅರಿಯುತ್ತಿರುತ್ತಾನೆ. 

ಇಡೀ ಉಸಿರಿನ ಕಾಯವನ್ನು ಅನುಭವಿಸಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ ಸ್ಥಾಪಿಸುತ್ತಾನೆ. ಆತನು ಅತ್ಯಂತ ಜಾಗೃತನು ವಿಶ್ಲೇಷಣೆಯಿಂದ ಕೂಡಿರುತ್ತಾನೆ.  ಉಸಿರನ್ನು ಬಿಟ್ಟು ಬೇರೇನನ್ನು ಯೋಚಿಸಲಾರ, ಗ್ರಹಿಸಲಾರ, ಅರಿಯಲಾರ, ಅನುಭವಿಸಲಾರ. ಆತನು ಕೇವಲ ಉಸಿರಿನಲ್ಲೇ ಗಮನವಿಟ್ಟು ಉಸಿರಿನ ಆದಿ ಅಂತ್ಯ ಮತ್ತು ಮಧ್ಯದ ಪ್ರಕ್ರಿಯೆಯ ಎಲ್ಲವನ್ನು ಅರಿಯುತ್ತಾನೆ. ಉಸಿರು ಮೊದಲು ಮೂಗಿನ ತುದಿಯಲ್ಲಿ ಆರಂಭವಾಗುತ್ತದೆ ಮತ್ತು ನಾಭಿಯ ಬಳಿ ಅಂತಿಮವಾಗುತ್ತದೆ. ಮೂಗು ಮತ್ತು ನಾಭಿಯ ಮಧ್ಯದ ಭಾಗವೇ ಮಧ್ಯ (ಅಥವಾ ಹೃದಯ ಮತ್ತು ಪುಪ್ಪಸ). ಆತ ಮೂಗಿನ ತುದಿ ಮಾತ್ರವಲ್ಲ ಅಥವಾ ಎದೆಯ ಭಾಗ ಮಾತ್ರವಲ್ಲ ಅಥವಾ ನಾಬಿಯ ಭಾಗ ಮಾತ್ರವಲ್ಲ, ಆತ ಈ ಮೂರು ಅವಸ್ಥೆಯಲ್ಲೂ ಅಂದರೆ ಆರಂಭ, ಮಧ್ಯ ಮತ್ತು ಅಂತ್ಯದಲ್ಲಿಯೂ ಪೂರ್ಣವಾಗಿ ಪ್ರಕ್ರಿಯೆ ಅರಿಯುತ್ತಾನೆ. ಹೀಗೆ ಆತನು ಉಸಿರಿನ ಕಾಯವನ್ನು ಅನುಭವಿಸಿ ಉಸಿರಾಟದಲ್ಲಿ ಜಾಗ್ರತೆ ಸ್ಥಾಪಿಸಿರುತ್ತಾನೆ. ಉದಾಹರಣೆಗೆ ತಾಯಿಯು ಮಗುವನ್ನು ತೊಟ್ಟಿಲಲ್ಲಿ ತೂಗಾಡಿಸುತ್ತಾ ಇರುವಾಗ ಬಹಳ ಜಾಗ್ರತೆಯಿಂದ ಇರುತ್ತಾಳೆ. ಮಗುವು ನಿದ್ರಿಸಿದರೂ ಮತ್ತೆ ಎಚ್ಚರಗೊಂಡಾಗ ಎಲ್ಲಿ ಎದ್ದು ಅಥವಾ ನಿಂತು ತೊಟ್ಟಿಲಿನಿಂದ ಬೀಳುವುದೋ ಎಂದು ಮಮತೆಯಿಂದ ಪೂರ್ಣ ಜಾಗ್ರತೆಯಿಂದ ಕೂಡಿ ಕಾಪಾಡುತ್ತಾಳೆ. ತನ್ನ ಗಮನವೆಲ್ಲಾ ಆ ಮಗುವಿನ ಮೇಲೆಯೇ ಇಟ್ಟಿರುತ್ತಾಳೆ. ಆ ಮಗುವಿನ ತೊಟ್ಟಿಲಿನ ಪ್ರತಿ ಅವಸ್ಥೆಯಲ್ಲಿ ಜಾಗ್ರತೆ ಸ್ಥಾಪಿಸಿರುತ್ತಾಳೆ. ಹಾಗೆಯೇ ನಾವು ಸಹ ಉಸಿರಾಟದ ಪ್ರತಿ ಸ್ಥಿತಿಯಲ್ಲೂ ಜಾಗ್ರತೆ ಸ್ಥಾಪಿಸಬೇಕಾಗಿದೆ. ಕಾಯವನ್ನು ಅನುಭವಿಸಿ ಅಂದರೆ ವಿಶಾಲ ಅರ್ಥದಲ್ಲಿ ಇಡೀ ಶರೀರದ ರೂಪಕಾಯದಲ್ಲಿ ಮತ್ತು ನಾಮಕಾಯ (ಮನಸ್ಸು)ದಲ್ಲಿ ಅನುಭವಿಸಿ ಉಸಿರಾಡುತ್ತಿದ್ದೇವೆ ಎಂದರ್ಥವಾಗುತ್ತದೆ. ಆದರೆ ಪರಿಣಿತರು ಕೇವಲ ಉಸಿರಿನ ಕಾಯ ಮಾತ್ರ ಎಂದು ಹೇಳುತ್ತಾರೆ.

4. ಆತನು ಹೀಗೆ ಸುಶಿಕ್ಷಣ ಪಡೆದು ಅರಿಯುತ್ತಿರುತ್ತಾನೆ. ಹೇಗೆಂದರೆ : ನಾನು ಕಾಯಸಂಖಾರ (ದೇಹದ ಚಟುವಟಿಕೆ)ಗಳನ್ನು ಶಾಂತಗೊಳಿಸುತ್ತ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಉಸಿರನ್ನು ಹೊರ ಬಿಡುತ್ತಿದ್ದೇನೆ.

ಇಲ್ಲಿ ಆತನು ದೇಹದ ಚಟುವಟಿಕೆಗಳನ್ನೆಲ್ಲಾ ಶಾಂತಗೊಳಿಸುತ್ತಾನೆ, ನಿಲ್ಲಿಸುತ್ತಾನೆ. ಸೂಕ್ಷ್ಮಗೊಳಿಸುತ್ತಾನೆ ಮತ್ತು ಪರಿಶುದ್ಧಿಗೊಳಿಸುತ್ತಾನೆ.
ಇಲ್ಲಿ ಶರೀರವು ಅಲ್ಲಾಡದೆ, ಬಾಗದೆ ಇರಬೇಕಾಗುತ್ತದೆ ಮತ್ತು ಯೋಚಿಸದೆ ಇರುವಾಗ ಶರೀರದಲ್ಲಿ ನಾನಾ ವಿಧವಾದ ಕಸಿವಿಸಿ, ಒತ್ತಡ, ಕಠಿಣತೆ, ಕ್ಷೊಭೆ, ನೋವು ನಿಲ್ಲುತ್ತದೆ. ಆತನ ದೃಢನಿಧರ್ಾರದಿಂದ ನೋವು ಎಲ್ಲವನ್ನು ಮೀರಿದ್ದರಿಂದ ಶರೀರವು ಶಾಂತವಾಗುತ್ತದೆ, ಪಳಗುತ್ತದೆ, ಮೆದುವಾಗುತ್ತದೆ ತುಂಬಾ ಸೂಕ್ಷ್ಮವಾಗುತ್ತದೆ. ಹೇಗೆಂದರೆ ಒಬ್ಬ ತಲೆಯ ಮೇಲೆ ಭಾರವನ್ನು ಎತ್ತಿಕೊಂಡು ಓಡುವುದು ಅಥವಾ ಬೆಟ್ಟ ಹತ್ತುವುದು ಮಾಡಿದಾಗ ಆತನ ಉಸಿರು ತಾರಕಕ್ಕೆ ಏರುತ್ತದೆ, ಅತಿಯಾಗುತ್ತದೆ. ಮೂಗಿನ ಹೊಳ್ಳೆಗೆ ಉಸಿರು ಜೋರಾಗಿ ಬೀಸುತ್ತದೆ. ದೇಹವೆಲ್ಲಾ ಕ್ಷೊಭೆಗೆ ಗುರಿಯಾಗಿ ದೇಹದಲ್ಲಿ ಅಶಾಂತತೆ ಮೂಡುತ್ತದೆ. ಆದರೆ ಅದೇ ವ್ಯಕ್ತಿ, ಭಾರವನ್ನು ಬಿಸಾಕಿ, ಓಡುವುದನ್ನು ನಿಲ್ಲಿಸಿ, ವಿಶ್ರಾಂತಿ ತೆಗೆದುಕೊಳ್ಳುತ್ತಾ ನಂತರ ಸ್ನಾನವನ್ನು ಮಾಡಿ, ತಂಪಾದ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ಉಸಿರಾಟವನ್ನು ಗಮನಿಸಿದಾಗ ಉಸಿರಾಟವು ತುಂಬಾ ಶಾಂತವಾಗಿ, ಸೂಕ್ಷ್ಮವಾಗಿ ಗೋಚರಿಸುತ್ತದೆ. ಉಸಿರೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಇದೇರೀತಿಯ ಅನುಭವವು ಆತನಿಗೆ ಕಾಯದ ಸಂಖಾರಗಳನ್ನು ಸೂಕ್ಷ್ಮಗೊಳಿಸುವುದ ರಿಂದಾಗಿ ಉಂಟಾಗುತ್ತದೆ.
ಕಾಯದ ಸಂಖಾರಗಳನ್ನು ಶಾಂತಗೊಳಿಸುವುದು ಅಥವಾ ಸೂಕ್ಷ್ಮಗೊಳಿಸುವುದು ಹೇಗೆ? ಒಂದು ಸಮಾಧಿಯಿಂದ ಹೇಗೆಂದರೆ ಪಂಚನೀವರಣಗಳನ್ನು ಮೀರುವುದರಿಂದಾಗಿ ನಂತರ ಸಮಾಧಿಯ ಹಂತಗಳನ್ನು ದಾಟುತ್ತಿದ್ದಂತೆ ಹಿಂದಿನದಕ್ಕಿಂತ ಈಗಿನ ಸ್ಥಿತಿಯು ಶಾಂತವಾಗಿ, ಸೂಕ್ಷ್ಮವಾಗಿ ಕಾಣುವುದು. ಇದೇರೀತಿ ಪ್ರತಿಯೊಂದು ಹಂತದಲ್ಲೂ ಮೇಲೆ ಹೋಗುತ್ತಿದ್ದಂತೆ ಹಿಂದಿನ ಹಂತವು ಸ್ಥೂಲವಾಗಿ ಕಾಣುತ್ತದೆ. ಈಗಿನ ಹಂತವು ಶಾಂತವಾಗಿ ಸೂಕ್ಷ್ಮವಾಗಿ ಕಾಣುತ್ತದೆ.
ಮತ್ತೊಂದು ವಿಧಾನವೆಂದರೆ ವಿಪಶ್ಶನ ಧ್ಯಾನದಿಂದ ಅಂದರೆ ವಿಪಶ್ಶನ ಧ್ಯಾನದಲ್ಲಿ ಕಾಯ ಸಂಖಾರಗಳು ಸ್ಥೂಲವಾಗಿ ಕಾಣುತ್ತದೆ. ಧಾತುಗಳು ಸೂಕ್ಷ್ಮವಾಗಿ ಕಾಣುತ್ತದೆ. ಹಾಗೆಯೇ ಅರೂಪ ಸಮಾಧಿಗೆ ಹೋಲಿಸಿದರೆ ರೂಪ ಸಮಾಧಿಯು ಸ್ಥೂಲವಾಗಿರುತ್ತದೆ. ಅರೂಪ ಸಮಾಧಿಯು ಸೂಕ್ಷ್ಮವಾಗಿರುತ್ತದೆ. ಆದರೆ ನಾಮ ರೂಪಗಳನ್ನು ಅರಿಯುತ್ತಿರುವಾಗ ಅರೂಪವು ಸ್ಥೂಲವಾಗಿ ಕಂಡುಬರುತ್ತದೆ. ಹಾಗೆಯೇ ತ್ರಿಲಕ್ಷಣವನ್ನು ಅರಿಯುವಾಗ ನಾಮರೂಪದ ವಿಶ್ಲೇಷಣೆಯು ಸ್ಥೂಲವಾಗಿ ಕಂಡುಬರುತ್ತದೆ. ಇದೇರೀತಿ ಸಾಧನೆ ಮುಂದುವರೆಯುತ್ತಿರುತ್ತದೆ.
ಗಾಳಿಯ ಬಗ್ಗೆ, ಉಸಿರಾಟದ ಬಗ್ಗೆ ಜಾಗ್ರತೆಯು ಸ್ಥಾಪಿತವಾಗಿ, ನಿಮಿತ್ತಗಳಲ್ಲಿ ಕೌಶಲ್ಯಹೊಂದಿ ಮತ್ತು ಧ್ಯಾನಂಗಗಳಲ್ಲಿ ಕೌಶಲ್ಯ ಹೊಂದಿ, ಸಮಾಧಿಯಲ್ಲಿ ನೈಪುಣ್ಯತೆ ಪಡೆದು, ಹಂತ ಹಂತವು ಶುದ್ಧಿ ಹೊಂದುತ್ತಾನೆ. ಹಂತಹಂತವು ಸೂಕ್ಷ್ಮಕ್ಕೆ ಏರುತ್ತಾನೆ. ಹೇಗೆಂದರೆ ಗಂಟೆಯ ಶಬ್ದದಂತೆ, ಗಂಟೆಯ ಶಬ್ದವು ಹೊರಹೊಮ್ಮಿದಾಗ ಗಂಟೆಯ ಶಬ್ದ ಕೇಳಿಸುತ್ತದೆ. ನಂತರ ಗಾಳಿಯಲ್ಲಿ ಶಬ್ದದ ಕಂಪನಗಳು ಅಲೆಗಳಿಂದಲೂ ಸೂಕ್ಷ್ಮವಾಗಿ ಗಂಟೆ ನಿಂತ ನಂತರವೂ ಕೇಳಿಸುತ್ತಿರುತ್ತದೆ. ಇದೇರೀತಿ ಸೂಕ್ಷ್ಮವನ್ನು ಅವಲಂಬಿಸಿ ಮತ್ತಷ್ಟು ಅಭಿವೃದ್ಧಿ ಆಗುತ್ತಿರುತ್ತದೆ.
ಆಯ್ಕೆಗಳು :
ಇಲ್ಲಿ ಆತನು ಚತುರ್ಥ ಸಮಾಧಿ ಪ್ರಾಪ್ತಿ ಮಾಡಿ ವಿಪಶ್ಶನ ಧ್ಯಾನ ಮಾಡಬಹುದು ಅಥವಾ ಪ್ರಥಮ ಧ್ಯಾನದ ನಂತರವೇ ವಿಪಶ್ಶನವನ್ನು ಪ್ರಾರಂಭಿಸಬಹುದು. ಅಥವಾ ಅರೂಪ ಸಮಾಧಿಯ ನಂತರವೂ ಪ್ರಾರಂಭಿಸಬಹುದು. ವಿಪಶ್ಶನದ ಪ್ರಾರಂಭಕ್ಕೆ ಯಾವ ಸ್ಥಿತಿಯು ಅಡ್ಡಿಯಿಲ್ಲ. ಆದರೆ ಸಮಥ ಧ್ಯಾನ ಮಾತ್ರ ಪ್ರಾರಂಭದಿಂದಲೇ ಆರಂಭಿಸಬೇಕಾಗುತ್ತದೆ.